ಬೆಂಗಳೂರು: ಭಿಕ್ಷೆ ಬೇಡುವರಿಗೆ ಬೆಂಗಳೂರು ಹಾಟ್ ಸ್ಪಾಟ್ ಎಂಬ ಮಾತು ಮೊದಲಿನಿಂದಲೂ ಕೇಳಿ ಬರುತ್ತಿದೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಭಿಕ್ಷಾಟನೆಯನ್ನ ದಂಧೆಯಾಗಿಸಿಕೊಂಡಿರುವ ಕುರಿತು ಪಬ್ಲಿಕ್ ಟಿವಿ ಈ ಹಿಂದೆ ವಿಸ್ತೃತ ವರದಿಯನ್ನು ಬಿತ್ತರಿಸಿತ್ತು. ಹೀಗೆ ಮಹಾರಾಷ್ಟ್ರದ ಪುಣೆಯಿಂದ ಭಿಕ್ಷೆ ಬೇಡಲು ಬಂದಾತ ಬೀದಿ ಹೆಣವಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಪುಣೆಯ ಮೂಲದ ಮನೋಜ್ ಭಿಕ್ಷೆ ಬೇಡಲು ಬೆಂಗಳೂರಿಗೆ ಬಂದಿದ್ದನು. ಪುಣೆಯಲ್ಲಿ ಸ್ಥಿತಿವಂತನಾಗಿದ್ದ ಮನೋಜ್ ಬೆಂಗಳೂರಿನಲ್ಲಿ ಚೆನ್ನಾಗಿ ಇರುತ್ತೀನಿ ಎಂದು ಪೋಷಕರ ವಿರೋಧದ ನಡುವೆಯೇ ಸಿಲಿಕಾನ್ ಸಿಟಿಗೆ ಆಗಮಿಸಿದ್ದನು. ಮನೋಜ್ ಎದೆಯ ಮೇಲೆ ಸಹೋದರನ ನಂಬರ್ ಅಚ್ಚೆ ಹಾಕಿಸಿಕೊಂಡಿದ್ದನು. ಎಂಜಿ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮನೋಜ್ ಭಿಕ್ಷಾಟನೆಯಿಂದ ಬಂದ ಹಣವನ್ನು ಕುಟುಂಬಸ್ಥರಿಗೆ ಕಳುಹಿಸುತ್ತಿದ್ದನು.ಮನೋಜ್ ಭಿಕ್ಷೆ ಬೇಡುವ ಪರಿಸ್ಥಿತಿ ಏನಿರಲಿಲ್ಲ. ನಾಲ್ಕು ಎಕರೆ ಕೃಷಿ ಭೂಮಿ ಹೊಂದಿದ್ದ, ಮನೋಜ್ ಸಹೋದರ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಚೆನ್ನಾಗಿ ಇರುತ್ತೇನೆಂದು ಬೆಂಗಳೂರಿಗೆ ಬಂದಿದ್ದ ಮನೋಜ್ ಭಿಕ್ಷಾಟನೆಯನ್ನು ವೃತ್ತಿಯಾಗಿಸಿಕೊಂಡಿದ್ದನು. ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ಮನೋಜ್, ಸೂಕ್ತ ಚಿಕಿತ್ಸೆ ಇಲ್ಲದೇ ಸಾವನ್ನಪ್ಪಿದ್ದಾನೆ. ಕೊನೆಗೆ ನಿರಾಶ್ರಿತ ಕೇಂದ್ರದವರು ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು.https://www.youtube.com/watch?v=ACmX0o8J9ykಪುತ್ರನಿಂದ ಫೋನ್ ಬರದೇ ಇದ್ದಾಗ ಭಯಗೊಂಡ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣದ ಬೆನ್ನಟ್ಟಿದಾಗ ಮೃತಪಟ್ಟ ಭಿಕ್ಷುಕನೇ ಮನೋಜ್ ಎಂದು ತಿಳಿದು ಬಂದಿದೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


