ಚಿತ್ರದುರ್ಗ: ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜೋಗಿಮಟ್ಟಿ ರಸ್ತೆಯಲ್ಲಿ ನಡೆದಿದೆ.ಬೆಂಗಳೂರು ಮೂಲದ ಪವನ್ ಆತ್ಮಹತ್ಯೆಗೆ ಶರಣಾದ ಯುವಕ. ಮೃತ ಪವನ್ ನಗರದ ಖಾಸಗಿ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಏಕಾಂಗಿಯಾಗಿ ಇರುತ್ತಿದ್ದನು. ಇಂದು ಕೆಲಸಕ್ಕೆ ರಜೆ ಹಾಕಿ ಈತ ಜೋಗಿಮಟ್ಟಿ ರಸ್ತೆ ಬಳಿಯ ಕೆರೆಯಲ್ಲಿ ಮುಳುಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.`ನನಗಾದಂತೆ ಬೇರೆಯವರಿಗೆ ಆಗಬಾರದು. ನನ್ನ ನಂಬಿಕೆಯೇ ನನಗೆ ದ್ರೋಹ ಮಾಡಿದೆ. ಮುಂದಿನ ಜನ್ಮ ಅಂತಿದ್ದರೆ ಒಳ್ಳೆಯ ಹುಡುಗನಾಗಿ ಹುಟ್ಟುವೆ’ ಎಂದು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ಕೆರೆಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ವಿಡಿಯೋದಲ್ಲಿ ಏನಿದೆ?
ಹಾಯ್ ಫ್ರೆಂಡ್ಸ್ ನನಗಂತೂ ಈ ಜೀವನ ಬೇಡ. ನಮ್ಮ ಅಕ್ಕ ಮತ್ತು ಅಣ್ಣ ಸ್ವಂತ ಮಗನ ರೀತಿ ನೋಡಿಕೊಂಡಿದ್ದಾರೆ. ಅವರಂತ ಒಳ್ಳೆಯವರು ಯಾರೂ ಇಲ್ಲ ಸ್ನೇಹಿತರೆ. ನನಗಾದ ರೀತಿ ಬೇರೆಯಾರಿಗೂ ಆಗಬಾರದು, ನನ್ನ ನಂಬಿಕೆನೇ ನನಗೆ ದ್ರೋಹ ಮಾಡಿತು. ಇಂದು ಈ ರೀತಿ ಇದ್ದೀನಿ, ಮುಂದೆ ಹೇಗಿರುತ್ತೇನೆ ಎಂದು ಗೊತ್ತಿಲ್ಲ. ಹೀಗಾಗಿ ಮುಂದಿನ ಜನ್ಮ ಇದ್ದರೆ ಒಳ್ಳೆಯ ಹುಡುಗನಾಗಿ, ಮನುಷ್ಯನಾಗಿ ಹುಟ್ಟುವಂತೆ ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


