ಬೆಂಗಳೂರು: ದ್ವಿಚಕ್ರ ವಾಹನದ ಎಂಜಿನ್ ಒಳಗೆ ನಾಗರಹಾವೊಂದು ಅವಿತು ಕುಳಿತ್ತಿದ್ದ ದೃಶ್ಯ ಕಂಡು ಬಂದಿದೆ.ನೆಲಮಂಗಲ ಪಟ್ಟಣದ ಗೋವಿಂದಪ್ಪ ಬಡಾವಣೆಯಲ್ಲಿ ಈ ದೃಶ್ಯ ಕಂಡುಬಂದಿದ್ದು, ವಾಹನದ ಎಂಜಿನ್ ಒಳಗೆ ನಾಗರಹಾವು ಅವಿತು ಕುಳಿತ್ತಿತ್ತು. ಈ ವೇಳೆ ವಾಹನದ ಮಾಲೀಕ ಮೋಹನ್ ತಮ್ಮ ಬೈಕ್ ಹತ್ತಲು ಮುಂದಾಗಿದ್ದಾರೆ.ಬೈಕ್ ಹತ್ತುವಾಗ ಮೋಹನ್ ನಾಗರಹಾವನ್ನು ಕಂಡು ಬೆಚ್ಚಿಬಿದಿದ್ದಾರೆ. ಹಾವನ್ನು ಕಂಡ ತಕ್ಷಣ ಉರಗ ರಕ್ಷಕ ಅರುಣ್ ರಾಜ್ ಅವರನ್ನು ಸಂಪರ್ಕಿಸಿದ್ದಾರೆ. ವಿಷಯ ತಿಳಿದ ಅರುಣ್ ರಾಜ್ ಕೂಡಲೇ ಸ್ಥಳಕ್ಕೆ ಆಗಮಿಸಿ ಎಂಜಿನ್ ನಲ್ಲಿ ಅಡಗಿದ್ದ ಹಾವನ್ನು ರಕ್ಷಿಸಿದ್ದಾರೆ.ನಾಗರಹಾವನ್ನು ರಕ್ಷಿಸುವ ವೇಳೆ ಸ್ಥಳೀಯರು ಅಲ್ಲಿಯೇ ನಿಂತುಕೊಂಡು ನೋಡುತ್ತಿದ್ದರು.Sign in to your account
Username or Email Address


Password

 Remember Me


