ಹಾವೇರಿ: ರಾಜ್ಯದ ರೈತರಿಗೆ ಸಿಎಂ ಕುಮಾರಸ್ವಾಮಿ ಅವರ ಸಾಲ ಮನ್ನದ ಯೋಜನೆ ಇನ್ನೂ ಸಿಕ್ಕಿಲ್ಲ. ಸಾಲ ಮನ್ನಾ ಆಗುತ್ತದೆ ಎಂದು ನಂಬಿದ್ದ ರೈತರಿಗೆ ಈಗ ಬ್ಯಾಂಕ್‍ನಿಂದ ನೋಟಿಸ್ ಬಂದಿದೆ.ರೈತರಿಗಾಗಿ ಸಾಲಮನ್ನಾ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಸಿಎಂ ಎಚ್‍ಡಿಕೆ ಎದೆ ತಟ್ಟಿಕೊಂಡು ಹೇಳುತ್ತಾರೆ. ಆದರೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಶಂಕ್ರಿಪುರ ಗ್ರಾಮದ ರೈತ ವೀರಭದ್ರಪ್ಪ ಅವರಿಗೆ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ. ಈ ಸಂಬಂಧ ಜೂನ್ 10 ರಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಲದ ಹಣವನ್ನು ಕಟ್ಟುವಂತೆ ನೋಟಿಸ್ ನೀಡಲಾಗಿದೆ.ಸಾಲ ಪಡೆಯುವ ಸಮಯದಲ್ಲಿ ರೈತ ವೀರಭದ್ರಪ್ಪ ಅವರಿಗೆ ರೈತರಾದ ಮಲ್ಲಪ್ಪ ಮತ್ತು ಲಿಂಗಪ್ಪ ಎಂಬ ರೈತರು ಶ್ಯೂರಿಟಿ ನೀಡಿದ್ದರು. ಈಗ ಇವರಿಗೂ ನೋಟಿಸ್ ಜಾರಿಯಾಗಿದೆ.ರೈತರ ಹೆಸರು ಸಾಲಮನ್ನಾದ ಪಟ್ಟಿಯಲ್ಲಿದೆ ಹೊರತು ಇನ್ನೂ ಸಾಲಮನ್ನಾ ಆಗಲೇ ಇಲ್ಲ. ಸಾಲ ಮನ್ನಾ ಆಗುತ್ತದೆ ಎಂದು ನಂಬಿದ್ದ ರೈತರು ಈಗ ಕಷ್ಟಪಡುವಂತೆ ಆಗಿದೆ.Sign in to your account
Username or Email Address


Password

 Remember Me


