ಬೆಂಗಳೂರು: ಬೆಳ್ಳಂಬೆಳಗ್ಗೆ ಪಾರ್ಕ್‌ನಲ್ಲಿ ಜಾಗಿಂಗ್ ತೆರಳುವ ಯುವತಿಯರೇ ಹುಷಾರ್. ಯಾಕೆಂದರೆ ಜಾಗಿಂಗ್ ಮಾಡುವ ನೆಪದಲ್ಲಿ ಕಾಮುಕರು ಬಂದು ಕಿರುಕುಳ ನೀಡುತ್ತಾರೆ.ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ಸೈಕೋ ಕಾಮಿಯ ಬಂಧನವಾಗಿದೆ. ಶ್ರೀನಿವಾಸ್ ರೆಡ್ಡಿ ಬಂಧಿತ ಆರೋಪಿಯಾಗಿದ್ದು, ಈತ ಜೀವನ್ ಭೀಮಾನಗರ, ಹಲಸೂರು, ಇಂದಿರಾನಗರ ಮತ್ತು ದೊಮ್ಮಲೂರು ಪಾರ್ಕ್ ಗಳಲ್ಲಿ ಯುವತಿಯರಿಗೆ ಕಾಟ ಕೊಡುತ್ತಿದ್ದನು. ಕನ್ನಡ ಬಾರದ ಉತ್ತರಭಾರತ ಮೂಲದ ಯುವತಿಯರನ್ನೇ ಆರೋಪಿ ಟಾರ್ಗೆಟ್ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಅಣ್ಣ ಅಣ್ಣ ಅಂತ ಮನೆಯಲ್ಲೇ ಲವರ್ ಜೊತೆ ಚಕ್ಕಂದ – ಹಳೆ ಪ್ರೇಮಿ ಜೊತೆ ಸೇರಿ ಪತಿಯ ಹತ್ಯೆಕಳೆದ ಮೂರು ದಿನದ ಹಿಂದೆ ಜೀವನ್ ಭೀಮಾನಗರ ಮಿರಿಂಡಾ ಸ್ಕೂಲ್ ಬಳಿ ಇರುವ ಪಾರ್ಕ್‌ನಲ್ಲಿ ವಿಕೃತಿ ಮೆರೆದಿದ್ದು, ಉತ್ತರ ಭಾರತೀಯ ಮೂಲದ ಟೆಕ್ಕಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ನಿನ್ನ ಕೈಗಳನ್ನ ನನ್ನ ಪ್ಯಾಂಟ್‍ನ ಒಳಗೆ ಇಡುತ್ತೀಯಾ ಎಂದು ಯುವತಿಗೆ ಕಿರುಕುಳ ನೀಡಿದ್ದಾನೆ. ವಾಕಿಂಗ್ ಮಾಡುತ್ತಿದ್ದ ಯುವತಿ ಇದನ್ನ ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾನೆ. ನಂತರ ಯುವತಿಯನ್ನೇ ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ.  ಇದನ್ನೂ ಓದಿ: ಪತ್ನಿಯ ಜೊತೆ ಸೆಕ್ಸ್ ಮಾಡೋದನ್ನ ನೋಡೋ ಆಸೆ – ಅದಕ್ಕಾಗಿ ಬೆಡ್‍ರೂಂನಲ್ಲೇ ಸಿಸಿಟಿವಿ ಇಟ್ಟ ಪತಿಈ ಬಗ್ಗೆ ಯುವತಿ ಐಪಿಸಿ ಸೆಕ್ಷನ್ 354 (ಲೈಂಗಿಕ ಕಿರುಕುಳ) ಹಾಗೂ 506 (ಜೀವಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿ ವಿರುದ್ಧ ಜೀವನ್ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.Sign in to your account
Username or Email Address


Password

 Remember Me


