ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರ ಸೋಲಿನ ಬಳಿಕ ತುಮಕೂರು ಜಿಲ್ಲೆಯ ಮೈತ್ರಿ ಮುಖಂಡರ ಕಲಹ ಅತಿರೇಕಕ್ಕೆ ತಲುಪುತ್ತಿದೆ.ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಗೂ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ರ ನಡುವಿನ ಕಿತ್ತಾಟ ಜೋರಾಗಿದೆ. ಗ್ರಾಮಾಂತರದಲ್ಲಿ ಬಿಜೆಪಿ ಲೀಡ್ ಬರಲು ರಾಜಣ್ಣರ ಕುತಂತ್ರವೇ ಕಾರಣ ಎಂದು ಶಾಸಕ ಗೌರಿಶಂಕರ್ ಆರೋಪಿಸಿದರು. ಅಲ್ಲದೆ ರಾಜಣ್ಣರೇ ಈಗಾಗಲೇ ನೀವು ಸೇರಿದ್ದು, ಮತ್ತೇ ಮತ್ತೇ ನಿಮ್ಮನ್ನ ಮಧುಗಿರಿ ಕ್ಷೇತ್ರದಿಂದ ಸೋಲಿಸುವ ತಾಕತ್ತು ನಮಗಿದೆ ಎಂದು ಗೌರಿಶಂಕರ್ ಸವಾಲು ಹಾಕಿದರು.ಈ ಹಿನ್ನೆಲೆಯಲ್ಲಿ ಗೌರಿಶಂಕರ್ ಮಧುಗಿರಿ ದಂಡಿನ ಮಾರಮ್ಮಗೆ ಪೂಜೆ ಸಲ್ಲಿಸುವ ನೆಪದಲ್ಲಿ ಮಧುಗಿರಿಗೆ ಎಂಟ್ರಿ ಕೊಟ್ಟಿದ್ದಾರೆ. ರಾಜಣ್ಣರನ್ನ ಮುಂದಿನ ಚುನಾವಣೆಯಲ್ಲಿ ಮತ್ತೆ ಸೋಲಿಸಲು ಈಗಿನಿಂದಲೇ ರಣತಂತ್ರ ರೂಪಿಸುತ್ತಿದ್ದಾರೆ.ನೂರಾರು ಜನ ಬೆಂಬಲಿಗರು, ಸಾವಿರಾರು ಜನ ಕಾರ್ಯಕರ್ತರೊಂದಿಗೆ ಮಧುಗಿರಿಗೆ ಭೇಟಿ ಕೊಟ್ಟು ಶಾಸಕ ಗೌರಿ ಶಂಕರ್ ಶಕ್ತಿಪ್ರದರ್ಶನ ಮಾಡಿದ್ದಾರೆ. ಗೌರಿಶಂಕರ್ ಅವರ ಈ ನಡೆ ಮತ್ತಷ್ಟು ರಾಜಕೀಯ ಬೆಳವಣಿಗೆಗೆ ಕಾರಣವಾಗಲಿದೆ.Sign in to your account
Username or Email Address


Password

 Remember Me


