ಹಾವೇರಿ: ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಕಿಡಿಗೇಡಿಗಳು ದೇವಿ ಮೂರ್ತಿ ಭಗ್ನಗೊಳಿಸಿದ್ದಾರೆ.ಗ್ರಾಮದ ಆರಾಧ್ಯ ದೈವ ಗಡಿ ದುರ್ಗಮ್ಮ ಮೂರ್ತಿಯನ್ನು ಕಿಡಗೇಡಿಗಳು ಭಗ್ನಗೊಳಿಸಿದ್ದಾರೆ. ಗ್ರಾಮದ ಹೊರ ವಲಯದಲ್ಲಿರುವ ದೇವಸ್ಥಾನ ಇದಾಗಿದ್ದು, ದೇವಿಯ ಕೈ, ಖಡ್ಗ, ಮುಖವನ್ನು ವಿರೂಪಗೊಳಿಸಿದ್ದಾರೆ.ಕಿಡಗೇಡಿಗಳ ಕೃತ್ಯಕ್ಕೆ ಗ್ರಾಮಸ್ಥರು ಖಂಡಿಸಿದ್ದು, ಅಲ್ಲದೆ ಕಿಡಗೇಡಿಗಳ ಬಂಧನಕ್ಕೆ ಭಕ್ತರು ಆಗ್ರಹಿಸಿದ್ದಾರೆ. ಶಿಶುನಾಳ, ಅತ್ತಿಗೇರಿ, ಹುಲಗೂರ, ಬಸನಾಳ ಗ್ರಾಮದ ಜನರಿಗೆ ದುರ್ಗಮ್ಮ ದೇವಿ ಆರಾಧ್ಯ ದೈವವಾಗಿದ್ದಾಳೆ.ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿಗ್ಗಾಂವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


