ವಿಜಯಪುರ: ಕರ್ತವ್ಯನಿರತ ಪುರಸಭೆ ಮುಖ್ಯಾಧಿಕಾರಿಯ ಮೇಲೆ ಜೆಡಿಎಸ್ ಕಾರ್ಯಕರ್ತನೊಬ್ಬ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಸಿಂದಗಿಯಲ್ಲಿ ಇಂದು ನಡೆದಿದೆ.ಜೆಡಿಎಸ್ ಕಾರ್ಯಕರ್ತ ಸಲೀಂ ಜಮನಾಳ ಹಲ್ಲೆ ಮಾಡಿದ ಆರೋಪಿ. ಪುರಸಭೆ ಮುಖ್ಯಾಧಿಕಾರಿ ಸೈಯ್ಯದ್ ಅಹ್ಮದ್ ಅವರಿಗೆ ಸಲೀಂ ಹೊಡೆದಿದ್ದಾನೆ. ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅಧ್ಯಕ್ಷತೆಯ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‍ನಲ್ಲಿ ಘಟನೆ ನಡದಿದೆ.ಸಿಂದಗಿಯ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‍ನಲ್ಲಿ ಇಂದು ಸಭೆ ನಡೆಸಲಾಗಿತ್ತು. ಈ ವೇಳೆ ನೀರಿನ ವಿಚಾರವಾಗಿ ಚರ್ಚೆ ನಡೆಸಿದ್ದಾಗ ಅಶೋಕ ಮನಗೂಳಿ ಅವರ ಎದುರಲ್ಲಿಯೇ ಸಲೀಂ ಪುರಸಭೆ ಮುಖ್ಯಾಧಿಕಾರಿ ಸೈಯ್ಯದ್ ಅಹ್ಮದ್ ಮೇಲೆ ಕೈ ಮಾಡಿದ್ದಾನೆ. ಸಲೀಂ ವರ್ತನೆಗೆ ಪುರಸಭಾ ಪೌರ ಕಾರ್ಮಿಕರ ಸಂಘ ಖಂಡನೆ ವ್ಯಕ್ತಪಡಿಸಿದ್ದು, ಪುರಸಭೆ ಎದುರು ಪ್ರತಿಭಟನೆ ನಡೆಸಿ ಸಲೀಂ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.Sign in to your account
Username or Email Address


Password

 Remember Me


