ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಉಗ್ರಪ್ಪ ವಿರುದ್ಧ 54,304 ಮತಗಳ ಅಂತರದಲ್ಲಿ ಬಿಜೆಪಿಯ ದೇವೇಂದ್ರಪ್ಪ ಜಯಗಳಿಸುವ ಮೂಲಕ ಲೋಕಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಶಾಸಕರ ಕಚ್ಚಾಟವೇ ಉಗ್ರಪ್ಪ ಅವರಿಗೆ ಮುಳುವಾಗಿದೆ.ಫಲಿತಾಂಶದಲ್ಲಿ ದೇವೇಂದ್ರಪ್ಪ ಅವರು 6,14,214 ಮತಗಳನ್ನು ಪಡೆದರೆ, ಉಗ್ರಪ್ಪ ಅವರು 5,59,970 ಮತಗಳನ್ನು ಗಳಿಸಿದ್ದಾರೆ.ಯಾವ ಯಾವ ತಾಲೂಕಿನಲ್ಲಿ ಯಾರಿಗೆ ಎಷ್ಟು ಲೀಡ್?
1) ಹೂವಿನಹಡಗಲಿ – ಶಾಸಕ, ಸಚಿವ ಪರಮೇಶ್ವರ ನಾಯ್ಕ್)
ಬಿಜೆಪಿ- 71198
ಕಾಂಗ್ರೆಸ್- 56853
ಬಿಜೆಪಿ ಲೀಡ್ – 143452) ಹಗರಿಬೊಮ್ಮನಹಳ್ಳಿ – ಕಾಂಗ್ರೆಸ್ ಶಾಸಕ, ಭೀಮಾನಾಯ್ಕ್
ಬಿಜೆಪಿ- 90110
ಕಾಂಗ್ರೆಸ್- 68523
ಬಿಜೆಪಿ ಲೀಡ್ – 215873) ಹೊಸಪೇಟೆ- ಕಾಂಗ್ರೆಸ್ ಶಾಸಕ, ಆನಂದಸಿಂಗ್
ಬಿಜೆಪಿ- 87914
ಕಾಂಗ್ರೆಸ್-69420
ಬಿಜೆಪಿ ಲೀಡ್ – 184944) ಕಂಪ್ಲಿ – ಕಾಂಗ್ರೆಸ್ ಶಾಸಕ, ಜೆ ಎನ್ ಗಣೇಶ
ಬಿಜೆಪಿ- 71786
ಕಾಂಗ್ರೆಸ್- 75217
ಕಾಂಗ್ರೆಸ್ ಲೀಡ್ – 34315) ಬಳ್ಳಾರಿ ಗ್ರಾಮೀಣ – ಕಾಂಗ್ರೆಸ್ ಶಾಸಕ, ನಾಗೇಂದ್ರ
ಬಿಜೆಪಿ- 68734
ಕಾಂಗ್ರೆಸ್- 82279
ಕಾಂಗ್ರೆಸ್ ಲೀಡ್ – 135456) ಬಳ್ಳಾರಿ ನಗರ – ಬಿಜೆಪಿ ಶಾಸಕ, ಸೋಮಶೇಖರರೆಡ್ಡಿ
ಬಿಜೆಪಿ- 72238
ಕಾಂಗ್ರೆಸ್- 76472
ಕಾಂಗ್ರೆಸ್ ಲೀಡ್- 42347) ಸಂಡೂರು – ಕಾಂಗ್ರೆಸ್ ಶಾಸಕ ಸಚಿವ, ಈ ತುಕಾರಾಂ
ಬಿಜೆಪಿ – 74142
ಕಾಂಗ್ರೆಸ್- 75479
ಕಾಂಗ್ರೆಸ್ ಲೀಡ್ – 13538) ಕೂಡ್ಲಿಗಿ – ಬಿಜೆಪಿ ಶಾಸಕ ಎನ್ ವೈ ಗೋಪಾಲಕೃಷ್ಣ
ಬಿಜೆಪಿ – 77837
ಕಾಂಗ್ರೆಸ್ – 55575
ಬಿಜೆಪಿ ಲೀಡ್ – 22.262ಬಿಜೆಪಿಗೆ ಪ್ಲಸ್ ಆಗಿದ್ದೇನು?:
ಮೋದಿ ಅಲೆಯಲ್ಲಿ ಚುನಾವಣೆ ಎದುರಿಸಿದ್ದು, ಶ್ರೀರಾಮುಲು ಕೂಡ ಬೆನ್ನಿಗೆ ನಿಂತಿದ್ದರು. ಮಾಜಿ ಡಿಸಿಎಂ ದಿವಂಗತ ಎಂ ಪಿ ಪ್ರಕಾಶ್ ಗರಡಿಯಲ್ಲಿ ಬೆಳೆದ ರಾಜಕಾರಣಿ ಅನ್ನೋ ಹೆಸರಿದೆ. ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಅನುಭವ ಇರುವುದು ಜೊತೆಗೆ ಒಮ್ಮೆ ಜಿಪಂ ಉಪಾಧ್ಯಕ್ಷ ಆಗಿರುವ ರಾಜಕೀಯ ಅನುಭವ ಇರೋದು ದೇವೇಂದ್ರಪ್ಪ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಅನುಕೂಲವಾಗಿದೆ.ಬಿಜೆಪಿಗೆ ಜಿಲ್ಲೆಯಲ್ಲಿ ಸರಿ ಸುಮಾರು 4 ಲಕ್ಷ ಮತಗಳ ವೋಟ್ ಬ್ಯಾಂಕ್ ಇದೆ. ಈ ಬಾರಿ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ರೆಡ್ಡಿ- ರಾಮುಲು ಟೀಂ, ಸಂಘ ಪರಿವಾರ, ಹಿಂದು ಸಂಘಟನೆಗಳು ದೇವೇಂದ್ರಪ್ಪ ಬೆನ್ನಿಗೆ ನಿಂತು ಚುನಾವಣೆಯಲ್ಲಿ ರಣತಂತ್ರ ರೂಪಿಸಿತ್ತು. ಅಲ್ಲದೇ ದೇವೇಂದ್ರಪ್ಪ ಅವರು ಸ್ಥಳೀಯ ಅಭ್ಯರ್ಥಿಯಾಗಿದ್ದು ಜೊತೆಗೆ ಜಾರಕಿಹೊಳಿ ಬೀಗರು ಅನ್ನೋದು ಬಹುದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು.ಕಾಂಗ್ರೆಸ್ ಸೋಲಿಗೆ ಕಾರಣವೇನು?:
ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರಲ್ಲಿ ಒಮ್ಮತ ಮೂಡದೆ ಒಳಗೊಳಗೆ ಕುದಿಯುತ್ತಿರುವ ಅಸಮಾಧಾನದಿಂದ ಈ ಬಾರಿ ಕಾಂಗ್ರೆಸ್ ಗೆ ಸೋಲುಂಟಾಗಿದೆ. ಉಗ್ರಪ್ಪ ಕೇವಲ ಎಸ್ ಟಿ ನಾಯಕರಾಗಿದ್ದು, ಜನಾಂಗಕ್ಕೆ ಅತೀ ಹೆಚ್ಚು ಆದ್ಯತೆ ನೀಡುತ್ತಾರೆ ಅನ್ನೋದು ಹಾಗೂ ಸಚಿವ ಡಿಕೆ ಶಿವಕುಮಾರ್ ಈ ಬಾರಿಯ ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸದಿರುವುದು ಕೂಡ ಪಕ್ಷಕ್ಕೆ ಮೈನಸ್ ಆಗಿದೆ.ಉಗ್ರಪ್ಪ ಅಧಿಕಾರಕ್ಕೆ ಬಂದರೆ ಅಧಿಕಾರಿಗಳಿಗೆ ಬೈತಾರೆ ಅನ್ನೋ ಮಾತುಗಳು ಅಧಿಕಾರಿ ವಲಯದಲ್ಲಿ ಕೇಳಿಬಂದಿತ್ತು. ಉಪಚುನಾವಣೆಯಲ್ಲಿ ಗೆದ್ದ ನಂತರ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಅವರು ಸ್ಥಳೀಯರಾಗಿರಲಿಲ್ಲ. ಅಲ್ಲದೆ ಸ್ಥಳೀಯರೊಂದಿಗೆ ಜಾಸ್ತಿ ಬೆರೆಯದಿರುವುದು ಕೂಡ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಇಷ್ಟೇ ಅಲ್ಲದೆ ಸಂಸದರಾದ ನಂತರ ಸ್ಥಳೀಯ ನಾಯಕರೊಂದಿಗೆ ಮುನಿಸು ಕಟ್ಟಿಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ 17,51,297 ಒಟ್ಟು ಮತದಾರರಿದ್ದು, 12,18,767 ಮತಗಳು ಚಲಾವಣೆಯಾಗಿತ್ತು. ಕ್ಷೇತ್ರದಲ್ಲಿ 11 ಮಂದಿ ಅಭ್ಯರ್ಥಿಗಳಿದ್ದು, ಕಾಂಗ್ರೆಸ್ ನಿಂದ ಉಗ್ರಪ್ಪ ಹಾಗೂ ಬಿಜೆಪಿಯಿಂದ ವೈ ದೇವೇಂದ್ರಪ್ಪ ಸ್ಪರ್ಧಿಸಿದ್ದರು.Sign in to your account
Username or Email Address


Password

 Remember Me


