– ಪವಿತ್ರ ಕಡ್ತಲ 
ಬೆಂಗಳೂರು: ಲೋಕಸಮರದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ಶನಿವಾರ ಪಹರಿ ಉಡುಗೆಯಲ್ಲಿ ಕೇದಾರನಾಥದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಅಲ್ಲಿಂದ ಮಳೆಯಲ್ಲೇ ನಡೆದು ಸುಮಾರು ಎರಡು ಕಿ.ಮೀ ದೂರವಿರುವ ಗುಹಾಲಯಕ್ಕೆ ತೆರಳಿ ಗವಿಯೊಳಗೆ ಧ್ಯಾನಸ್ಥರಾಗಿ ಮಹಾತಪಸ್ಸು ಮಾಡುತ್ತಿದ್ದಾರೆ. ನಿನ್ನೆ ಮಧ್ಯಾಹ್ನ 2.45 ರಿಂದ ಧ್ಯಾನಸ್ಥರಾಗಿರುವ ಮೋದಿ ಇಂದು ಬೆಳಗ್ಗೆ 10.45ಕ್ಕೆ ಮುಗಿಸಲಿದ್ದಾರೆ. ಬರೋಬ್ಬರಿ 20 ಗಂಟೆ ಕಾಲ ಮೋದಿ ತಪಸ್ಸು ಕೈಗೊಂಡಿದ್ದಾರೆ. ಧ್ಯಾನದ ಬಳಿಕ ಬದರೀನಾಥ್ ದೇಗುಲಕ್ಕೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.ನಿನ್ನೆ ಬುದ್ಧಪೂರ್ಣಿಮಯೆ ದಿನವೇ ಗವಿ ಧ್ಯಾನ ಆರಂಭಿಸಿದ್ದು ನಾನಾ ಕುತೂಹಲ ಸೃಷ್ಟಿಸಿದೆ. ನೂರು ವರ್ಷ ಐತಿಹ್ಯವಿರುವ, ಶಿವವನ್ನು ಒಲಿಸಲು ಪಾರ್ವತಿ ತಪಸ್ಸು ಮಾಡಿರುವ ಮಹಾಶಕ್ತಿಯ ಕ್ಷೇತ್ರದಲ್ಲಿ ಮೋದಿ ತಪಸ್ಸಿಗೆ ಹಾಗೂ ಬುದ್ಧನ ಬದುಕು ಸಾಕ್ಷ್ಯತ್ಕಾರ ಕಂಡ ದಿನವೇ ಮೋದಿ ಮಾಡಿದ ಧ್ಯಾನಕ್ಕೆ ಮಹಾ ಶಕ್ತಿ ಇದೆಯಂತೆ.ಶಿಲಾಗುಹೆಯಲ್ಲಿ ಮಾಡಿದ ತಪಸ್ಸಿನ ವಿಶೇಷವೇನು?
* ಮೋದಿ ಗುಹೆಯಲ್ಲಿ ಬರೀ ಮೌನವಾಗಿ ಧ್ಯಾನಸ್ಥರಾಗಿರಲಿಲ್ಲ. ಬದಲಾಗಿ ಅಕ್ಷರಲಕ್ಷ ಜಪ ಮಾಡಿದ್ರು. ಓಂ ನಮಃ ಶಿವಾಯ ಮಂತ್ರವನ್ನು ನಿರಂತರವಾಗಿ ಜಪಿಸಿದ್ರು.
* ಓಂ ನಮಃ ಶಿವಾಯ ಮಂತ್ರಘೋಷವನ್ನು ಓಂಕಾರ ಘೋಷವನ್ನು ಒಂದು ಲಕ್ಷ ಬಾರಿ ಶ್ರದ್ಧೆಯಿಂದ ಜಪಿಸಿದ್ರೆ ಇಷ್ಟಾರ್ಧ ಈಡೇರುತ್ತದೆ ಅನ್ನುವ ನಂಬಿಕೆ ಇದೆ.
* ಪ್ರಧಾನಿ ಮೋದಿ ತಪಸ್ಸು ಮಾಡಲು ಬುದ್ಧ ಪೂರ್ಣಿಮೆಯ ದಿನವನ್ನೇ ಆಯ್ಕೆ ಮಾಡಿಕೊಂಡರು. ಬುದ್ಧನಿಗೆ ಸಾಕ್ಷ್ಯಾತ್ಕರವಾದ ದಿನ ಬುದ್ಧ ಹುಟ್ಟಿದ ದಿನ. ಅಷ್ಟೇ ಅಲ್ಲ ಬುದ್ಧಪೌರ್ಣಿಮೆಯ ದಿನಕ್ಕೆ ಅಪಾರ ಶಕ್ತಿಯಿದ್ದು ಭಕ್ತರು ಒಂದು ಬಾರಿ ಪಠಿಸಿದ ಮಂತ್ರಘೋಷ ಲಕ್ಷ ಮಂತ್ರಘೋಷವಾಗಿ ಮಾರ್ಪಾಡಾಗಲಿದೆ.* ಪ್ರಧಾನಿ ಕಾಷಾಯ ತೊಟ್ಟಿದ್ದು ಏಕಾಗ್ರತೆ ಹಾಗೂ ಶುದ್ಧಿಯ ಸಂಕೇತವಾಗಿ. ಅಲ್ಲದೆ ಕೇದಾರನಾಥದಲ್ಲೂ ಪೂಜೆ ಮಾಡುವಾಗ ಸಾಂಪ್ರದಾಯಿಕ ಪಹರಿ ವಸ್ತ್ರ ಧರಿಸಿದರು. ಪೂಜೆಯಲ್ಲಿ ಆಯಾಯ ವಸ್ತ್ರಗಳಿಗೂ ಅಷ್ಟೆ ಮಹತ್ವವಿದೆ.
* ಪಾರ್ವತಿ ದೇವಿ ಇದೇ ಗುಹೆಯಲ್ಲಿ ತಪಸ್ಸು ಮಾಡಿ ಶಿವದೇವರನ್ನು ಒಲಿಸಿಕೊಂಡಳು ಅನ್ನುವ ಪ್ರತೀತಿ ಇದೆ. ಸಾಕ್ಷತ್ ಶಿವನ ಸಾಕ್ಷ್ಯತ್ಕಾರದ ಸನ್ನಿಧಾನದಲ್ಲಿ ಮೋದಿಯ ತಪಸ್ಸು ರಾಜಕೀಯ ಭವಿಷ್ಯದ ಕಠಿಣ ಹಾದಿಯನ್ನು ಸುಗಮಗೊಳಿಸಲಿದೆ ಅನ್ನೋದು ಜ್ಯೋತಿಷಿಗಳ ಮಾತು.* ಐದು ಮೀಟರ್ ಉದ್ದ ಮೂರು ಮೀಟರ್ ಅಗಲವುಳ್ಳ ಈ ಗುಹೆಯಲ್ಲಿ ಮೋದಿ ಈ ಹಿಂದೆಯೂ ತಪಸ್ಸು ಮಾಡಿದ್ದರಂತೆ. ಇದರಿಂದ ರಾಜಕೀಯ ಬದುಕಿನಲ್ಲಿ ಔನತ್ಯಕ್ಕೇರಿದ್ದರೆಂದು ಹೇಳಲಾಗುತ್ತಿದೆ.
* ಈ ಶಿಲಾಗುಹೆಯಲ್ಲಿ ತಪಸ್ಸು ಮಾಡೋದು ಅಂದರೆ ಅದು ಅಷ್ಟು ಸುಲಭವಲ್ಲ, ತಪಸ್ಸು ಮಾಡುವವರಿಗೆ ಅತ್ಯಂತ ಏಕಾಗ್ರತೆ, ಶ್ರದ್ಧೆ, ಆತ್ಮ ಹಾಗೂ ಪರಮಾತ್ಮನ ಅನುಸಂಧಾನ ಮಾಡುವಂತ ವಿಶೇಷ ಶಕ್ತಿ ಇರಬೇಕು.
* ಈ ಶಿಲಾಗುಹೆಯಲ್ಲಿ ತಪಸ್ಸು ಮಾಡಿದವರ ಬೇಡಿಕೆ ಇಷ್ಟಾರ್ಥ ಎಲ್ಲವೂ ನೇರವೇರಲಿದೆ. ಇದು ಗೆಲುವಿನ ಮಹಾಯಜ್ಞ ಹಾಗೂ ಶಿವನನ್ನು ನೇರವಾಗಿ ಒಲಿಸಿಕೊಳ್ಳುವ ಮಾರ್ಗ ಅನ್ನೋದು ಧಾರ್ಮಿಕ ನಂಬಿಕೆ.ಚುನಾವಣೆಯ ಮಹಾ ಫಲಿತಾಂಶದ ಹೊಸ್ತಿಲಲ್ಲಿ ಮೋದಿಯ ಈ ತಪಸ್ಸು ನಾನಾ ಕುತೂಹಲಕ್ಕೆ ಕಾರಣವಾಗಿದೆ. ದೇವರ ಒಲಿಸಿಕೊಳ್ಳಲು ಹೊರಟ ಮೋದಿಗೆ ಮತದಾರ ಒಲೀತಾನ ಪ್ರಧಾನಿಯ ಸಿಂಹಾಸನ ಸಿಗಲಿದೆಯಾ ಅನ್ನೋ ಪ್ರಶ್ನೆ ಮೂಡಿದ್ದು, ಗೆಲುವಿನ ಸಾಕ್ಷ್ಯತ್ಕಾರವಾ, ಸೋಲಿನ ಕಹಿಯಾ ಅನ್ನೋದು ದಿನಾಂಕ 23 ರಂದು ಗೊತ್ತಾಗಲಿದೆ.






 Advertisement 




Sign in to your account
Username or Email Address


Password

 Remember Me


