ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯ ಪ್ರತಿಷ್ಠಿತ ಸೈಂಟ್ ಚಾರ್ಲ್ಸ್ ಶಾಲೆಯಲ್ಲಿ ನಾನ್ ವೆಜ್ ಮಾರಾಟಕ್ಕಿಟ್ಟಿದ್ದು, ಇದೀಗ ವಿವಾದಕ್ಕೀಡಾಗಿದೆ.ಶಾಲೆಯಲ್ಲಿ ಫನ್ ಫೇರ್ ಹೆಸರಿನಲ್ಲಿ ಮಕ್ಕಳಿಗೆ ನಾನ್ ವೆಜ್ ತಿನ್ನಿಸಲಾಗಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಫನ್ ಫೇರ್ ನಲ್ಲಿ ಮಕ್ಕಳಿಗೆ ನಾನಾ ಬಗೆಯ ಖಾದ್ಯಗಳ ಮಾರಾಟ ಇಟ್ಟುಕೊಳ್ಳಲಾಗಿತ್ತು. ಮಕ್ಕಳು ಮನೆಯಿಂದ ಊಟ ತರುವಂತಿಲ್ಲ. ಈ ಫೆಸ್ಟ್ ನಲ್ಲೇ ಕೊಂಡು ತಿನ್ನಬೇಕು ಎಂದು ಶಾಲಾ ಆಡಳಿತ ಮಂಡಳಿ ಸೂಚಿಸಿತ್ತು.ಈ ಫನ್ ಫೇರ್ ನಲ್ಲಿ ಚಿಕನ್ ಕಬಾಬ್ ಸೇರಿದಂತೆ ಇನ್ನಿತರ ನಾನ್ ವೆಜ್ ಆಹಾರವನ್ನು ಮಾರಾಟಕ್ಕೆ ಇಡಲಾಗಿತ್ತು. ಈ ಬಗ್ಗೆ ಕೆಲ ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ನಾನ್ ವೆಜ್ ಆಹಾರವನ್ನು ಶಾಲಾ ಆವರಣದಿಂದ ದೂರ ಸಾಗಿಸಲಾಯಿತು.ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರ ಜೊತೆ ಮಾತುಕತೆ ವೇಳೆ ಅವರ ಕೊಠಡಿಯಲ್ಲಿ ಗಾಂಧಿ, ಅಂಬೇಡ್ಕರ್ ಭಾವಚಿತ್ರಗಳು ಇಲ್ಲದ ಬಗ್ಗೆಯೂ ಪೋಷಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಬಿಇಓ ಅವರಿಗೆ ಪೋಷಕರು ದೂರು ಸಲ್ಲಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


