ಬೆಂಗಳೂರು: ಸಹೋದರ ಡಾ. ಹರೀಶ್ ಅವರು ಮೃತಪಟ್ಟ ಒಂದು ವರ್ಷದಲ್ಲಿ ಅಂಬರೀಶ್ ಅವರು ನಿಧನರಾಗಿದ್ದಾರೆ. ಹರೀಶ್ 2017ರ ನವೆಂಬರ್ 24 ರಂದು ನಿಧನರಾಗಿದ್ದರು. ಕಾಕತಾಳೀಯ ಎಂಬಂತೆ ಇದೇ ದಿನದಂದು ಅಂಬರೀಶ್ ಅವರು ಕೂಡ ನಿಧನಾಗಿದ್ದಾರೆ.ಡಾ. ಹರೀಶ್ ಅವರು 35 ವರ್ಷಗಳಿಂದ ದೊಡ್ಡರಸಿಕೆರೆ ಸಮೀಪದ ಕೆ.ಎಂ ದೊಡ್ಡಿಯಲ್ಲಿ ತಮ್ಮದೇ ಆದ ಕ್ಲೀನಿಕ್ ಹೊಂದಿದ್ದರು. ಕಳೆದ ವರ್ಷ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನವೆಂಬರ್ 24 ಮೈಸೂರಿನ ನಿವಾಸದಲ್ಲಿ ಮೃತಪಟ್ಟಿದ್ದರು. ಸಾಕಷ್ಟು ದಿನಗಳಿಂದ ಅಂಬರೀಶ್ ಅವರು ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ವಿಪರ್ಯಾಸವೆಂದರೆ ಅಣ್ಣ ನಿಧನರಾದ ದಿನದಂದೇ ಅಂಬರೀಶ್ ಅವರು ಕೂಡ ಇಹಲೋಕವನ್ನು ತ್ಯಜಿಸಿದ್ದಾರೆ.ಮಂಡ್ಯದ ಗಂಡು, ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಎಂದೇ ಕನ್ನಡ ಚಿತ್ರರಂಗದಲ್ಲಿ ಅಂಬರೀಶ್ ಹೆಸರು ಮಾಡಿದವರು. ಅಂಬರೀಶ್ ಅವರನ್ನು ಮಂಡ್ಯದ ಮಗ ಎಂದೇ ಅಭಿಮಾನಿಗಳು ಕರೆಯುತ್ತಿದ್ದರು. ಅವರ ನಿಧನದಿಂದ ಅಭಿಮಾನಿಗಳಿಗೆ ಬಹಳ ಬೇಸರವಾಗಿದ್ದು, ತಮ್ಮ ಪ್ರೀತಿಯ ನಟನನ್ನು ಮಂಡ್ಯದ ಮಣ್ಣಿನಲ್ಲೇ ಮಣ್ಣು ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ರಾತ್ರಿಯಿಂದಲೇ ಅಭಿಮಾನಿಗಳು ಸಂದೇಶಗಳನ್ನು ರವಾನಿಸುತ್ತ ಮನವಿ ಮಾಡಿಕೊಳ್ಳುತ್ತಿದ್ದಾರೆ.ಅಂಬರೀಶ್ ಅವರು ದೊಡ್ಡ ಅರಸಿಕೆರೆಗೆ ಒಂದು ಕಳಸವಿದ್ದಂತೆ. ಅವರು ಇಡೀ ಊರೇ ಹೆಮ್ಮ ಪಡುವಂತಹ ವ್ಯಕ್ತಿ. ಚಿತ್ರರಂಗ ಹಾಗೂ ರಾಜಕೀಯದಲ್ಲಿ ಅಪಾರ ಕೀರ್ತಿಯನ್ನು ಗಳಿಸಿದ್ದಾರೆ. ಅವರ ನಿಧನದಿಂದ ಇಡೀ ಊರೇ ಅನಾತವಾಗಿದೆ ಎಂದು ದೊಡ್ಡರಸಿಕೆರೆ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


