ಮೈಸೂರು: ನಾಯಿಗೆ ಊಟ ಬಡಿಸುವ ರೀತಿಯಲ್ಲಿ ಅಂಗನವಾಡಿಗೆ ಬರುವ ಪುಟ್ಟ ಮಕ್ಕಳಿಗೆ ಆಯಾ ಊಟ ಬಡಿಸಿರುವ ಅಮಾನವೀಯ ಘಟನೆ ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.ಭೀಮನಹಳ್ಳಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿರುವ ಆಯಾ ಲಲಿತಮ್ಮ ಈ ರೀತಿ ಮಾನವೀಯತೆ ಇಲ್ಲದೇ ನಡೆದುಕೊಂಡಿದ್ದಾಳೆ. ಅಂಗನವಾಡಿ ಸಹಾಯಕಿ ಲಲಿತಮ್ಮ ಮಕ್ಕಳನ್ನು ಸಾಲಾಗಿ ಕೂರಿಸಿ ತಟ್ಟೆಗೆ ಅನ್ನ ಹಾಕಿ ನಾಯಿಗಳ ಮುಂದೆ ತಟ್ಟೆ ತಳ್ಳುವಂತೆ ಮಕ್ಕಳ ಮುಂದೆ ತಳ್ಳುತ್ತಿದ್ದಾರೆ.ಲಲಿತಮ್ಮ ಊಟ ಬಡಿಸುವ ಅಮಾನವೀಯ ವೈಖರಿಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಲಲಿತಮ್ಮಳ ಈ ರೀತಿ ಕೆಲಸ ಕಂಡರೂ ಆಕೆಗೆ ಹೆದರಿ ಗ್ರಾಮಸ್ಥರು ಕೂಡ ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಆದ್ದರಿಂದ ಈ ವೀಡಿಯೋ ನೋಡಿಯಾದರೂ ಅಧಿಕಾರಿಗಳು ಲಲಿತಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


