ಬೆಂಗಳೂರು: ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮುಂದೆ ಹಾಜರಾಗಿರೋ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರು ಅಧಿಕಾರಗಳ ವಿರುದ್ಧ ಗರಂ ಆಗಿದ್ದಾರೆ.ಸಿಸಿಬಿ ಹಾಜರಾದ ಕೂಡಲೇ ವಿಚಾರಣೆ ನಡೆಸಿದ ಅಧಿಕಾರಿಗಳು ತಡರಾತ್ರಿ 2 ಗಂಟೆವರೆಗೂ ರೆಡ್ಡಿಗೆ ಡ್ರಿಲ್ ಮಾಡಿದ್ದಾರೆ. ಸತತ 10 ಗಂಟೆಗಳ ಕಾಲ ವಿಚಾರಣೆಯಿಂದ ಬೇಸತ್ತ ರೆಡ್ಡಿ, ಬೇಕಂತಲೇ ಈ ರೀತಿ ಡ್ರಿಲ್ ಮಾಡುತ್ತಿದ್ದೀರಾ? ಕೋರ್ಟ್ ನಲ್ಲಿ ಉತ್ತರ ಕೊಡಬೇಕಾಗುತ್ತೆ ಅಂತ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ ಅನ್ನೋ ಮಾಹಿತಿಯೊಂದು ಸಿಸಿಬಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.ಅಲ್ಲದೇ ನನ್ನ ಮಾತು ಕೇಳಲಿಲ್ಲ ನೀವು ಅಂತ ತನ್ನ ಪರ ವಕೀಲರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ರೆಡ್ಡಿ ಮಾತು ಕೇಳಿ ವಕೀಲ ಚಂದ್ರಶೇಖರ್ ಅವರು ಸೈಲೆಂಟ್ ಆಗಿ ಸಿಸಿಬಿಯಿಂದ ಹೊರಬಂದಿದ್ದಾರಂತೆ. ತನ್ನ ಪಿಎ ಅಲಿಖಾನ್ ಜೊತೆಯೂ ಮಾತಾಡದೆ ಜನಾರ್ದನ ರೆಡ್ಡಿ ಮೌನವಾಗಿ ಕುಳಿತಿದ್ದರಂತೆ. ಇಡೀ ರಾತ್ರಿ ನಿದ್ದೆ ಇಲ್ಲದೇ ಧ್ಯಾನ ಮಾಡುತ್ತಿದ್ದ ರೆಡ್ಡಿ, ಆಗಾಗ ತಿರುಪತಿ ವೆಂಕಟೇಶ್ವರನನ್ನು ನೆನೆದು ಕೈಮುಗಿಯುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


