ಬೆಂಗಳೂರು: ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಹೊಡೆಯುವ ಆತುರದಲ್ಲಿರೊರಿಗೆ ಪಾಲಿಕೆ ಶಾಕ್ ನೀಡಲಿದೆ. ಪಟಾಕಿ ತ್ಯಾಜ್ಯ ನೀವೇ ಕ್ಲಿನ್ ಮಾಡಬೇಕು. ಇಲ್ಲವಾದ್ರೆ ಕ್ರಿಮಿನಲ್ ಕೇಸ್ ಬೀಳುತ್ತದೆ. ಹೈಕೋರ್ಟ್ ಸೂಚನೆಯಿಂದ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಹೀಗಾಗಿ ಪಟಾಕಿ ತ್ಯಾಜ್ಯ ಇದ್ರೆ ಕ್ರಿಮಿನಲ್ ಕೇಸ್ ದಾಖಲಿಸಲು ಪಾಲಿಕೆ ದೀಪಾವಳಿಯ ರಜೆ ಪಡೆಯದೇ ಕೆಲಸ ಮಾಡ್ತಿದೆ.ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಹೊಡೆದ್ಮೇಲೆ ಅದರ ತ್ಯಾಜ್ಯವನ್ನು ನೀವೇ ಶುಚಿಗೊಳಿಸಬೇಕು. ಪೌರಕಾರ್ಮಿಕರು ಕ್ಲೀನ್ ಮಾಡ್ತಾರೆ ಅಂತ ಕಾಯುವಂತಿಲ್ಲ. ಒಂದು ವೇಳೆ ನಿಮ್ಮ ಮನೆ ಮುಂದೆ ಪಟಾಕಿ ತ್ಯಾಜ್ಯ ಇದ್ರೆ ಪೌರಕಾರ್ಮಿಕರೇ ದೂರು ಕೊಡ್ತಾರೆ. ಬಳಿಕ ಪಾಲಿಕೆ ಅಧಿಕಾರಿಗಳು ನಿಮ್ಮ ಮಾಹಿತಿಯನ್ನ ಪೊಲೀಸ್ ಇಲಾಖೆಗೆ ಕೊಡ್ತಾರೆ. ಹೀಗಾಗಿ ಪಟಾಕಿ ತ್ಯಾಜ್ಯದ ಬಗ್ಗೆ ಎಚ್ಚರ ಸಾರ್ವಜನಿಕರೇ ಎಚ್ಚರ ಅಂತ ಪಾಲಿಕೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ನಾಡಿಗೆಲ್ಲಾ ದೀಪಾವಳಿಯ ಸಂಭ್ರಮ, ಆದ್ರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಕಸ ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದಾರೆ. ಹೈಕೋರ್ಟ್ ಚಾಟಿ ಬೀಸಿರುವ ಹಿನ್ನೆಲೆಯಲ್ಲಿ ನೆಮ್ಮದಿ ಕಳೆದುಕೊಂಡಿರುವ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ಅಧಿಕಾರಿಗಳು ಕಸ ನಿರ್ವಹಣೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ, ಆರೋಗ್ಯಾಧಿಕಾರಿಗಳು ಹಾಗೂ ಎಂಜಿನಿಯರ್ಸ್ ರಸ್ತೆ ರಸ್ತೆಗಳನ್ನೂ ಪರಿಶೀಲನೆ ನಡೆಸಿ ಕಸ ರಾಶಿ ಬೀಳದಂತೆ ಎಚ್ಚರಿಕೆ ವಹಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


