ಬೆಂಗಳೂರು: ಇಂದು ಕರ್ನಾಟಕ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿರುವ ಬೆನ್ನಲ್ಲೇ ನಿಜವಾದ ಆತ್ಮಾವಲೋಕನಕ್ಕೆ ಇದು ಸರಿಯಾದ ಸಮಯವಾಗಿದೆ ಎಂದು ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ.ನಿಜವಾದ ಆತ್ಮಾವಲೋಕನಕ್ಕಾಗಿ ಇದು ಸರಿಯಾದ ಸಮಯ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಜನ, ಸತ್ಯವಾದ ನ್ಯಾಯೋಚಿತ ಮಾತು, ದಯವಿಟ್ಟು ಎಲೆಕ್ಷನ್ ಟೈಂನಲ್ಲಿ ಬಿಜೆಪಿಗೆ ಸೇರುವ ಅಭ್ಯರ್ಥಿಗೆ ಟಿಕೆಟ್ ಕೊಡಬೇಡಿ. ಸಾಮಾನ್ಯ ಕಾರ್ಯಕರ್ತನಿಗೆ ಕೊಟ್ಟಿದ್ದರು ಓಡಿ ಹೋಗುತ್ತಿರಲಿಲ್ಲ. ಸೋತರು ಪರವಾಗಿಲ್ಲ ಹೆಮ್ಮೆಯಿಂದ ಇರಬಹುದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.Time for genuine introspection.— S.Suresh Kumar (@nimmasuresh) November 6, 2018ಮುಂದಿನ ಪರೀಕ್ಷೆಯ ತಯಾರಿಗಾಗಿ ಕೇಡರ್ ಆಧಾರಿತವಾಗಿ ಪಕ್ಷವನ್ನು ಸಂಘಟಿಸುವ ಕಾಲ ಬಂದಿದೆ ಎಂದು ಸುರೇಶ್ ಕುಮಾರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.ಬಿಜೆಪಿ ಕರ್ನಾಟಕದಲ್ಲಿ ಸಮಗ್ರ ಬದಲಾವಣೆ ಅಗತ್ಯವಿದೆ. 2ನೇ ತಲೆಮಾರಿನ ನಾಯಕರುಗಳು ಮುನ್ನೆಲೆಗೆ ಬರಲು ಇದು ಸಕಾಲ ಸ್ವಾರ್ಥ ರಾಜಕಾರಣ ನಮ್ಮಂತ ಕಾರ್ಯಕರ್ತರನ್ನು ಭ್ರಮನಿರಸನಗೊಳಿಸುತ್ತಿದೆ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.Time for our cadre based Organisation-Party to re-invent itself to get ready for the Major Exam.— S.Suresh Kumar (@nimmasuresh) November 6, 2018ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


