ಬೆಂಗಳೂರು: ರಾಜ್ಯಕ್ಕೆ ಹಿಂಗಾರು ಮಳೆ ಎಂಟ್ರಿಯಾಗಿದ್ದು ಇಂದಿನಿಂದ ರಾಜ್ಯದಲ್ಲಿ ವರ್ಷಧಾರೆಯ ಅಬ್ಬರ ಶುರುವಾಗಲಿದೆ.ಅಕ್ಟೋಬರ್ ಎರಡನೇ ವಾರವೇ ಬರಬೇಕಾಗಿದ್ದ, ಈಶಾನ್ಯ ಮುಂಗಾರು ಈ ವರ್ಷ ವಿಳಂಬವಾಗಿದೆ. ಚೆನ್ನೈನಲ್ಲಿ ಈಗಾಗಲೇ ವರುಣನ ಅಬ್ಬರ ಶುರುವಾಗಲಿದ್ದು, ರಾಜ್ಯದಲ್ಲಿ ನವೆಂಬರ್ ಮೂರು ಹಾಗೂ ನಾಲ್ಕರವರೆಗೂ ಮಳೆ ಇರಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡಿನಲ್ಲಿ ತುಸು ಹೆಚ್ಚೆ ಅನಿಸುವಷ್ಟು ಮಳೆ ಇರಲಿದೆ. ಬೆಂಗಳೂರಿನಲ್ಲೂ ಮೇಘಸ್ಫೋಟದ ಅಬ್ಬರ ಇರಲಿದೆ. ಈಶಾನ್ಯ ಮಾರುತದ ಆಗಮನದ ವಿಳಂಬದಿಂದ ಬೆಳೆಗಳಿಗೆ ನೀರಿಲ್ಲದೇ ಒದ್ದಾಡುತ್ತಿದ್ದ ರೈತರಿಗೆ ಕೊಂಚ ಸಂತಸ ಮೂಡುವಂತಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


