ಬೆಂಗಳೂರು: ಸಿದ್ದರಾಮಯ್ಯರ ಕನಸಿನ ಕೂಸು ಎಂದೇ ಬಿಂಬಿತವಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆಯ ಬಗ್ಗೆ ಹಲವರು ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ್ದರು. ಈಗಾಗಲೇ ಇಂದಿರಾ ಕ್ಯಾಂಟೀನ್ ನಾಡಿನ ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಸರ್ಕಾರದ ಸಭೆಗಳಲ್ಲಿಯೂ ಇದೇ ಊಟವನ್ನು ನೀಡಿದ್ರೆ ದುಂದು ವೆಚ್ಚವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೌನ್ಸಿಲ್ ಸಭೆಗೆ ಇಂದಿರಾ ಕ್ಯಾಂಟೀನ್ ನಿಂದಲೇ ಆಹಾರ ಪೂರೈಕೆ ಆಗಲಿದೆ.ಬಿಬಿಎಂಪಿ ಮೇಯರ್- ಉಪಮೇಯರ್ ಚುನಾವಣೆ ಬಳಿಕ ಇಂದು ಮೊದಲ ಕೌನ್ಸಿಲ್ ಸಭೆ ನಡೆಯಲಿದೆ. ಜೊತೆಗೆ ಇದೇ ಮೊದಲ ಬಾರಿಗೆ ಸಾಮಾನ್ಯ ಸಭೆಗೂ ಭೂರಿ ಬೋಜನದ ಬದಲು ಬೆಳಗ್ಗೆ ಮಧ್ಯಾಹ್ನ ಸಂಜೆಯ ಊಟ ತಿಂಡಿ ಇಂದಿರಾ ಕ್ಯಾಂಟೀನ್ ನಿಂದಲೇ ಬರಲಿದೆ.ಇಂದಿರಾ ಕ್ಯಾಂಟೀನ್ ಊಟದ ಗುಣಮಟ್ಟದ ಬಗ್ಗೆ ಸದಾ ಖ್ಯಾತೆ ತೆಗೆಯುತ್ತಿದ್ದ ವಿರೋಧ ಪಕ್ಷಕ್ಕೆ ಹಾಗೂ ಅಧಿಕಾರಿಗಳಿಗೂ ಆಹಾರದ ಗುಣಮಟ್ಟದ ಬಗ್ಗೆ ಖಚಿತಪಡಿಸಲು ಇಂದಿರಾ ಕ್ಯಾಂಟೀನ್ ಊಟ ಮಾಡುವ ಸವಾಲು ನೀಡಲಾಗಿತ್ತು. ಹೀಗಾಗಿ ಕೌನ್ಸಿಲ್ ಸಭೆಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಾದ ರಿವಾಡ್ರ್ಸ್ ಸಂಸ್ಥೆಯವರು ಒಟ್ಟು ಐನೂರು ಊಟ ನೀಡಲಿದ್ದಾರೆ.ಮೆನು ಹೀಗಿದೆ:
ಬೆಳಗ್ಗೆ- ಕಾಫಿ, ಟೀ
ಮಧ್ಯಾಹ್ನ- ಅನ್ನ ಸಾಂಬಾರ್, ಪಲಾವ್ ಜೊತೆ ರೈತಾ
ಸಂಜೆ- ವಡೆ, ಚಟ್ನಿ ನಂತರ ಕಾಫಿ, ಟೀಒಟ್ಟಿನಲ್ಲಿ ಹಿಂದೆಯಲ್ಲ ಎರಡು ಲಕ್ಷ ರೂಪಾಯಿವರೆಗಿನ ಬಗೆಬಗೆಯ ಊಟ ಸವಿಯುತ್ತಿದ್ದ 198 ಕಾರ್ಪೋರೇಟರ್ಸ್ ಹಾಗೂ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಊಟವನ್ನು ಮಾಡಬೇಕಿದೆ. ಇದರೊಂದಿಗೆ ಜನಸಾಮಾನ್ಯರಿಗೆ ನೀಡುವುದಕ್ಕಿಂತ ಸ್ವಲ್ಪ ಹೆಚ್ಚಿಗೆ ವಿಧವಾದ ಆಹಾರ ನೀಡುತ್ತಿದ್ದು, ಟಿ-ಕಾಫಿ, ವಡೆ, ಹೊಸ ಮೆನು ಸೇರಿಸಲಾಗಿದೆ. ಇಷ್ಟನ್ನೂ ಕೂಡಾ ಯಾರೆಲ್ಲಾ ಊಟ ಮಾಡ್ತಾರೆ ಅಥವಾ ಇಂದಿರಾ ಕ್ಯಾಂಟೀನ್ ಊಟ ಅಂತ ಮುಖ ತಿರುಗಿಸಿ ಹೋಗ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv






 Advertisement 




Sign in to your account
Username or Email Address


Password

 Remember Me


