ಬೀದರ್: ನಾನು ಬಸವಣ್ಣನವರ ಅನುಯಾಯಿಗಳಲ್ಲಿ ಎಲ್‍ಟಿಟಿಇ ವರ್ಗಕ್ಕೆ ಸೇರಿದವನು ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ 17ನೇ ಕಲ್ಯಾಣ ಪರ್ವದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಮಾತನಾಡಿದ ಶಾಸಕರು, ಬಸವಣ್ಣನವರ ಅನುಯಾಯಿಗಳಲ್ಲಿ ಹಲವಾರು ವರ್ಗಗಳಿವೆ. ಅದರಲ್ಲಿ ನಾನು ಎಲ್‍ಟಿಟಿಇ ವರ್ಗಕ್ಕೆ ಸೇರಿದವನು. ಪ್ರಾಣ ಕೊಡುತ್ತೇವೆ ಇಲ್ಲವೇ ಗುರಿ ಮುಟ್ಟುತ್ತೇವೆ. ನಾನು ಬಂದು ಹೋಗುವ ಗಿರಾಕಿ ಅಲ್ಲಾ ಎಂದು ಕಿಡಿಕಾರಿದ್ದಾರೆ.ಪ್ರತ್ಯೇಕ ಲಿಂಗಾಯತ ಧರ್ಮ ಅಂತ ಘೋಷಿಸಿದರೆ ರಾಜ್ಯಕ್ಕೆ ಮೊದಲ ಗೌರವ ಸಲ್ಲುತ್ತದೆ. ಕ್ಷತ್ರೀಯರು ಸ್ಥಾಪಿಸಿದ ಬುದ್ಧ, ಜೈನ ಧರ್ಮಗಳಿಗೆ ಪ್ರತ್ಯೇಕ ಸ್ಥಾನಮಾನ ನೀಡಲಾಗಿದೆ. ಆದರೆ ಲಿಂಗಾಯತ ಧರ್ಮವನ್ನು ಇಂತಹ ಅವಕಾಶದಿಂದ ದೂರ ಇಡಲಾಗಿದೆ ಎಂದು ಆರೋಪಿಸಿದರು.ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರ ಬ್ಯಾಟ್ ಬೀಸಿದ ಸಚಿವರು, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕುರಿ ಕಾಯುವವನು ಕೈ ಹಾಕಿದ್ದಾನೆ. ಕುರುಬರಿಂದ ಮೊದಲು ಆರಂಭವಾದರೆ ನೂರಕ್ಕೆ ನೂರಷ್ಟು ಕೆಲಸ ಯಶಸ್ವಿಯಾಗುತ್ತದೆ. ಒಂದು ವೇಳೆ ಬೇರೆಯವರು ಕೈ ಹಾಕಿದ್ದರೆ ನಾನು ಭರವಸೆ ನೀಡುತ್ತಿರಲಿಲ್ಲ. ಕಾಂಗ್ರೆಸ್ ನಾಯಕರು ಕೈ ಹಾಕಿದ್ದು, ರಾಹು, ಕೇತು ಒಟ್ಟಾಗಿ ಅಡ್ಡಿಯಾದರೂ ಪ್ರತ್ಯೇಕ ಲಿಂಗಾಯತ ಧರ್ಮದ ಚಳುವಳಿ ನಿಲ್ಲಿಸಲು ಸಾಧ್ಯವಿಲ್ಲ ಎಂದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


