ಚಾಮರಾಜನಗರ: “ಒಳಿತು ಮಾಡು ಮನುಸ ನೀನು ಇರೋದು ಮೂರು ದಿವಸ” ಹಾಡನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿರುವ ಹಾಡುಗಾರರಿಗೆ ಜೀವನದ ಬಂಡಿ ಓಡಿಸಲು ಆಟೋದ ಅಗತ್ಯವಿದೆ.ಜಿಲ್ಲೆಯ ಬಾಗಲಿಯ ಮಹಾದೇವ್ ಸ್ವಾಮಿ ಅವರು ಇದೀಗ ಕರುನಾಡಿನ ಮನೆ ಮಾತಾಗಿರುವ ಹಾಡುಗಾರನಾಗಿದ್ದಾರೆ. ಇವರ ವಯಸ್ಸು, 34 ವರ್ಷ, ಪತ್ನಿ, ಮಗು, ತಾಯಿಯೊಂದಿಗೆ ವಾಸವಾಗಿದ್ದಾರೆ. ತಾನು ಮಾಡದ ತಪ್ಪಿಗೆ ಜೀವಾವಧಿ ಶಿಕ್ಷೆ ಅನುಭವಿಸಿದ್ರು.ಜೈಲಿನಲ್ಲಿ ಕಷ್ಟ ಅನುಭವಿಸುತ್ತಿದ್ದ ಮಹಾದೇವ್ ಸ್ವಾಮಿ ಆತ್ಮಹತ್ಯೆಗೆ ವಿಫಲ ಪ್ರಯತ್ನ ಮಾಡಿದ್ರು. ತನ್ನ ತಾಯಿ-ತಂಗಿಗಾಗಿ ಬದುಕಬೇಕೆಂಬ ಹಠ ತೊಟ್ಟರು. ಅದೊಂದು ದಿನ ಜೈಲಿನಲ್ಲಿ ಐಪಿಎಸ್ ಅಧಿಕಾರಿ ಮುಂದೆ ದೇವರ ನಾಮ ಹಾಡಿ ಮೆಚ್ಚುಗೆ ಗಳಿಸಿದ್ರು. ಸತತ 11 ವರ್ಷ 3 ತಿಂಗಳು ಜೈಲುವಾಸ ಅನುಭವಿಸಿ ಜೈಲಿನಿಂದ ಬಿಡುಗಡೆಗೊಂಡು ಮುಂದಿನ ದಾರಿ ಕಾಣದೇ ಇದ್ದರು.ಸ್ವಂತ ಪದಗಳನ್ನು ಕಟ್ಟಿ ಜನಪದ ಗೀತೆಗಳನ್ನು ಹಾಡುವುದರಲ್ಲಿ ನಿಪುಣನಾಗಿದ್ದ ಮಹಾದೇವ್ ಸ್ವಾಮಿಗೆ ಖಾಸಗಿ ವಾಹಿನಿಯೊಂದರಲ್ಲಿ ಹಾಡುವ ಅವಕಾಶ ಒದಗಿಬಂತು. ಅಲ್ಲಿ `ಒಳಿತು ಮಾಡು ಮನುಸ ನೀನು ಇರೋದು ಮೂರು ದಿವಸ’ ಅನ್ನೋ ಹಾಡನ್ನು ಹಾಡಿದ್ದಕ್ಕೆ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.ಕಿರುತೆರೆಯಲ್ಲಿ ಸತತ 8 ವಾರಗಳನ್ನು ತನ್ನ ವಿಭಿನ್ನ ಶೈಲಿಯ ಹಾಡಿನಿಂದ ರಂಜಿಸಿರುವ ಗ್ರಾಮೀಣ ಪ್ರತಿಭೆ ಮಹಾದೇವ್ ಸ್ವಾಮಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಜೀವನ ನಿರ್ವಹಣೆಗೆ ಅಲ್ಲೊಂದು ಇಲ್ಲೊಂದು ಸಿಗುವ ಅರ್ಕೆಸ್ಟ್ರಾಗಳಲ್ಲಿ ಹಾಡಿ ಬರುವ ಅಲ್ಪ ಆದಾಯದಲ್ಲಿ ಜೀವನ ಕಟ್ಟಿಕೊಂಡಿದ್ದಾರೆ.ಕಿತ್ತು ತಿನ್ನುವ ಬಡತನ, ಸಂಬಂಧಿಕರಿಂದ ದೂರ ಉಳಿದಿರುವ ಸ್ವಾಮಿ ಪತ್ನಿ ಮತ್ತು ಒಂದು ಮುದ್ದಾದ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದು. ಮಗುವಿನ ಮುಂದಿನ ಭವಿಷ್ಯ ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ. ಕಲೆಯನ್ನು ಮುಂದುವರಿಸಲು ಹಾಗೂ ಸ್ವಾಭಿಮಾನದಿಂದ ಜೀವನ ಮಾಡಲು ಯಾರಾದ್ರೂ ದಾನಿಗಳು ಆಟೋ ನೀಡಿದ್ರೆ ಸ್ವಾಭಿಮಾನದ ಜೀವನ ನಡೆಸಲು ಸಹಾಯವಾಗುತ್ತಾದೆ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ನೆರವು ಬಯಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.youtube.com/watch?v=i7yRu5-F4P4Sign in to your account
Username or Email Address


Password

 Remember Me


