ಬೆಂಗಳೂರು: ಇಂದು ನಾಡಿನಾದ್ಯಂತ ವಿಜಯ ದಶಮಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಆದ್ರೆ ಇಂದೇ ರಾಜಮಾತೆ ಪ್ರಮೋದಾದೇವಿ ಅವರ ತಾಯಿ 98 ವರ್ಷದ ಪುಟ್ಟ ಚಿನ್ನಮ್ಮಣ್ಣಿ ವಿಧಿವಶರಾಗಿದ್ದಾರೆ. ಜಂಬೂ ಸವಾರಿ ದಿನವೇ ರಾಜಮಾತೆಯ ತಾಯಿಯವರು ವಿಧಿವಶವಾಗಿದ್ದರಿಂದ ಅಪಶಕುನನಾ? ಅರಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣ ಆಗುತ್ತಾ..? ಜಂಬೂ ಸವಾರಿ ನಡೆಯುತ್ತಾ? ಎಂಬಿತ್ಯಾದಿ ಪ್ರಶ್ನೆಗಳು ನಾಡಿನ ಜನರಲ್ಲಿ ಹುಟ್ಟಿಕೊಂಡಿವೆ.ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಖ್ಯಾತ ಜ್ಯೋತಿಷಿ ರೇಣುಕಾರಾಧ್ಯ ಗುರೂಜಿ, ಪುಟ್ಟ ಚಿನ್ನಮ್ಮಣ್ಣಿ ನಿಧನದಿಂದ ಅರಮನೆಯಲ್ಲಿ ಸೂತಕವಾದ ವಾತಾವರಣ ನಿರ್ಮಾಣ ಆಗಲ್ಲ. ಪ್ರಮೋದಾದೇವಿಯವರ ತವರು ಮನೆ ಆಗಿದ್ದರಿಂದ ಅರಮನೆಗೆ ಸೂತಕ ಎಂಬ ಮಾತು ಬರಲ್ಲ. ಮೃತ ದೇಹದ ದರ್ಶನ ಪಡೆಯುವ ಮೊದಲು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ ಆಗಬಹುದು. ಆದ್ರೆ ದರ್ಶನ ಪಡೆದ ನಂತರ 5 ಅಥವಾ 11 ಅಥವಾ 13 ದಿನ ಜನರು ದೇವತಾ ದರ್ಶನ ಮತ್ತು ದೇವತಾ ಕಾರ್ಯ ಮಾಡಬಾರದು ಎಂಬುದು ನಮ್ಮ ಸಂಸ್ಕಾರಗಳಲ್ಲಿದೆ. ಜಂಬೂ ಸವಾರಿಯ ನಂತರ ದರ್ಶನ ಪಡೆತಯುತ್ತಾರಾ..? ಅಥವಾ ಧಾರ್ಮಿಕ ವಿಧಿ ವಿಧಾನಗಳಿಂದ ದೂರು ಉಳಿಯುತ್ತಾರಾ? ಎಂಬುದನ್ನು ಪ್ರಮೋದಾ ದೇವಿ ಅವರು ನಿರ್ಧರಿಸಬೇಕಿದೆ. ಪುಟ್ಟಚಿನ್ನಮ್ಮಣಿ ವಯೋಸಹಜ, ಪ್ರಕೃತ್ತಿದತ್ತವಾಗಿ ವಿಧಿವಶವಾಗಿದ್ದರಿಂದ ಅರಮನೆಗೆ ಸೂತಕದ ಛಾಯೆ ಬರೋದಿಲ್ಲ. ನಾಡ ಹಬ್ಬ ದಸರಾ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಾಡಿಗೆ ಕೆಡುಕು, ಒಳ್ಳೆಯದಾಗಲ್ಲ, ಅಪಶುಕನ ಎಂಬಿತ್ಯಾದಿ ಸುಳ್ಳು. ನಾಡಿನ ಜನರು ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ. ವಿಜಯದಶಮಿ ದಿನದಂದು ದೈವಾಧೀನರಾದ್ರೆ, ಆತ್ಮ ನೇರವಾಗಿ ಭಗವಂತನ ಪಾದಕ್ಕೆ ಸೇರುವ ಮೂಲಕ ಮೋಕ್ಷ ಸಿಗುತ್ತೆ ಎಂಬ ಧರ್ಮದಲ್ಲಿ ನಂಬಿಕೆ ಇದೆ. ಅರಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆದ್ರೆ, ಒಂದು ಕಡೆ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳು ನಡೆಯಬಹುದು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


