ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ವಾಕ್ ಸಮರ ಮುಂದುವರಿದಿದ್ದು, ಆ ಯಮ್ಮ ಹ್ಯೂಮನ್ ಬಿಯಿಂಗ್ ಹೌದೊ ಅಲ್ಲವೋ ನೀವೇ ಹೇಳಿ ಅಂತಾ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಂಎ, ನಾನೊಬ್ಬ ಮನುಷ್ಯ, ಹ್ಯೂಮನ್ ಬಿಯಿಂಗ್, ಶೋಭಾ ಕರಂದ್ಲಾಜೆ ಅವರು ಹ್ಯೂಮನ್ ಬಿಯಿಂಗ್ ಹೌದೊ ಅಲ್ಲವೋ ನನಗೆ ಗೊತ್ತಿಲ್ಲ. ಮಾತಿನ ಮೇಲೆ ಹಿಡಿತ ಕಾಯ್ದುಕೊಳ್ಳಬೇಕು ಅಂದು ಟಾಂಗ್ ಕೊಟ್ಟರು.  ಇದನ್ನೂ ಓದಿ: ಸಿದ್ದರಾಮಯ್ಯ ಹಲ್ಲಿಲ್ಲದ ಹಾವು: ಶೋಭಾ ಕರಂದ್ಲಾಜೆಶೋಭಾ ಕರಂದ್ಲಾಜೆ ಅವರು ಸ್ನೇಕ್ ಫ್ಯಾಮಿಲಿಗೆ ಸೇರಿರಬೇಕು. ನಾನು ಹಾವಲ್ಲ, ಹಾವಿಗೆ ಹಲ್ಲುಗಳು ಇರಲಿ, ಇಲ್ಲದಿರಲಿ ಹಾಲು ಎರೆಯಲೇ ಬೇಕು. ಈ ರೀತಿ ಹಗುರವಾಗಿ ಮಾತನಾಡುವುದನ್ನ ಆ ಯಮ್ಮ ಬಿಡುವುದು ಒಳ್ಳೆಯದು ಅಂತಾ ಹೇಳಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹತ್ತಿರ ಬಾಂಬೇ ಇಲ್ಲ. ಇನ್ನು ಟುಸ್ ಆಗೋದು ಎಲ್ಲಿಂದ ಬಂತು. ಅವರಿಗೆ ಸತ್ಯ ಅಂದರೆ ಗೊತ್ತಿಲ್ಲ, ಬರೀ ಸುಳ್ಳು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು. ಉಪಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಚರ್ಚೆ ನಡೆಸಿ, ರಣತಂತ್ರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://youtu.be/JtQJDl2Yv0sSign in to your account
Username or Email Address


Password

 Remember Me


