ಬೆಂಗಳೂರು: ನಗರದ ಹೊರವಲಯ ನೆಲಮಂಗಲದ ಕೆರೆಕತ್ತಿಗನೂರು ಗ್ರಾಮದ ನಿವಾಸಿ ಗಂಗಮ್ಮ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಜೀವನಾಧಾರಕ್ಕಾಗಿ ಕಳೆದ 25 ವರ್ಷಗಳಿಂದ ಕ್ಷೌರ ವೃತ್ತಿ ಮಾಡುತ್ತಿದ್ದಾರೆ. ಪತಿ ನಿಧನರಾದ ಕಾರಣ ತಾವೇ ಕತ್ತರಿ ಹಿಡಿದು ಕ್ಷೌರ ಕೆಲಸವನ್ನು ಈ ಇಳಿವಯಸ್ಸಿನಲ್ಲೂ ಮುಂದುವರಿಸಿದ್ದಾರೆ.ಒಂದು ಪೆಟ್ಟಿ ಅಂಗಡಿಯಲ್ಲಿ ಯುವಕರು-ವಯೋವೃದ್ಧರಿಗೆ ಕಟಿಂಗ್, ಶೇವಿಂಗ್ ಮಾಡುತ್ತಿದ್ದಾರೆ. ಜೊತೆಗೆ ಪುಟಾಣಿ ಮಕ್ಕಳಿಗೆ ಈಗಿನ ಟ್ರೆಂಡಿಂಗ್‍ನ ಕಟಿಂಗ್ ಸಹ ಮಾಡುತ್ತಾರೆ. ಗ್ರಾಮದ ಪಕ್ಕದಲ್ಲಿರುವ ಮಹಿಮೇರಂಗನಾಥ ಸ್ವಾಮಿ ದೇವಾಲಯಕ್ಕೆ ಆಗಮಿಸುವ ಹರಕೆ ಹೊತ್ತ ಭಕ್ತರ ಮುಡಿ ತೆಗೆಯೋ ಕೆಲಸವನ್ನೂ ಗಂಗಮ್ಮ ಮಾಡುತ್ತಾರೆ.ಬಾಲ್ಯದಿಂದ ಗಂಗಮ್ಮ ಅವರು ಕ್ಷೌರ ವೃತ್ತಿ ಕಲಿತಿರಲಿಲ್ಲ. ಗಂಡನ ಅಕಾಲಿಕ ನಿಧನ, ಜೀವನ ಸಾಗಿಸುವ ಅನಿವಾರ್ಯತೆಯಿಂದ ಈ ಕೆಲಸ ಮಾಡಲು ಆರಂಭಿಸಿದ್ದಾರೆ. ಗಂಗಮ್ಮರಿಗೆ ಮೂವರು ಮಕ್ಕಳಿದ್ದು, ಅವರನ್ನ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಈ ಮೂಲಕ ದುಡಿದು ತಿನ್ನದೇ ಸೋಮಾರಿ ಆಗಿರುವರಿಗೆ ಗಂಗಮ್ಮ ಮಾದರಿಯಾಗಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.youtube.com/watch?v=4qdoepVwGx4Sign in to your account
Username or Email Address


Password

 Remember Me


