ಬಳ್ಳಾರಿ: ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಬೆಳಗಾವಿ ರಾಜಕಾರಣದಿಂದ ಹಿಂದೆ ಸರಿದು ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ತಲೆಕೆಡಿಸಿಕೊಂಡರೆ, ಸಚಿವ ರಮೇಶ ಜಾರಕಿಹೊಳಿ ಸಹೋದರರು ಬಳ್ಳಾರಿ ರಾಜಕಾರಣಕ್ಕೆ ಎಂಟ್ರಿಯಾಗಲು ಸಜ್ಜಾಗಿದ್ದಾರೆ.ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಬೀಗರಿಗೆ ಟಿಕೆಟ್ ಕೊಡಿಸಲು ಜಾರಕಿಹೊಳಿ ಸಹೋದರರು ಇದೀಗ ಲಾಬಿ ಶುರು ಮಾಡಿದ್ದಾರೆ. ಹರಪನಹಳ್ಳಿಯ ಅರಸಿಕೇರಿ ಗ್ರಾಮದಲ್ಲಿ ಬೀಗರಾಗಿರುವ ಬಳ್ಳಾರಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಅರಸಿಕೇರಿ ದೇವೇಂದ್ರಪ್ಪರಿಗೆ ಜಾರಕಿಹೊಳಿ ಸಹೋದರರು ಟಿಕೆಟ್ ಕೊಡಿಸಲು ಇದೀಗ ಮುಂದಾಗಿದ್ದಾರೆ.ದೇವೇಂದ್ರಪ್ಪಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿರುವ ಅರಸಿಕೇರಿ ದೇವೇಂದ್ರಪ್ಪ ಪುತ್ರ ಮಂಜುನಾಥರಿಗೆ ಸತೀಶ ಜಾರಕಿಹೊಳಿ ಸಹೋದರಿಯನ್ನು ಕೊಟ್ಟು ಮದುವೆ ಮಾಡಲಾಗಿದೆ. ಹೀಗಾಗಿ ಅಬಕಾರಿ ಆಯುಕ್ತರಾಗಿರುವ ಮಂಜುನಾಥರ ತಂದೆ ದೇವೇಂದ್ರಪ್ಪಗೆ ಎಂಪಿ ಟಿಕೆಟ್ ಕೊಡಿಸುವ ಮೂಲಕ ಜಾರಕಿಹೊಳಿ ಸಹೋದರರು ಡಿಕೆ ಶಿವಕುಮಾರ್ ಗೆ ಮತ್ತೊಮ್ಮೆ ಟಾಂಗ್ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.ಶಾಸಕ ನಾಗೇಂದ್ರ ಸಹೋದರಗೆ ಟಿಕೆಟ್ ಕೊಡಲು ಬಳ್ಳಾರಿ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರು ಇದೀಗ ತಮ್ಮ ಬೀಗರಿಗೆ ಟಿಕೆಟ್ ಕೊಡಿಸಲು ಲಾಬಿ ಶುರು ಮಾಡಿದ್ದಾರೆ ಎನ್ನಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


