ಬೆಂಗಳೂರು: ನಾಯಿಗಳ ಹಾವಳಿಯನ್ನು ತಡೆಯಲು ಸಾಧ್ಯವಾಗದೆ ಇದೀಗ ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ. ಪುಂಡ-ಪೋಕರಿಗಳಿಂದ ತಪ್ಪಿಸಿಕೊಳ್ಳಲು ಮಕ್ಕಳು ಕರಾಟೆ ಸೇರಿ ಇನ್ನಿತರ ವಿದ್ಯೆ ಕಲಿಯುತ್ತಾರೆ. ಆದರೆ ಈಗ ಬಿಬಿಎಂಪಿ ಮಕ್ಕಳಿಗೆ ಮತ್ತೊಂದು ರೀತಿಯ ಪಾಠ ಹೇಳುವುದಕ್ಕೆ ಸಿದ್ಧವಾಗಿದೆ.ಬೆಂಗಳೂರಿನ ನಾಯಿಗಳು ಬನ್ನೇರುಘಟ್ಟ ಸಿಂಹಗಳ ತರ ಇರುತ್ತವೆ ಅನ್ನೋ ಮಾತಿದೆ. ಇದಕ್ಕೆ ಪೂರಕ ಎನ್ನುವಂತೆ ತಿಂಗಳಿಗೊಂದು ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗುತ್ತಿವೆ. ಮೂರು ವರ್ಷಗಳಲ್ಲಿ ಹೆಚ್ಚು ಮಕ್ಕಳು ಮತ್ತು ವಯಸ್ಕರು ಸೇರಿ 35 ಸಾವಿರಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿದೆ.ಕಳೆದ ಒಂದು ತಿಂಗಳ ಹಿಂದೆ ವಿಭೂತಿ ಪುರದಲ್ಲಿ 11 ವರ್ಷದ ಮಗುವೊಂದನ್ನು ನಾಯಿಗಳ ಗುಂಪು ಕಚ್ಚಿ ಕೊಂದಿದ್ದವು. ಇಷ್ಟೆಲ್ಲ ನಾಯಿ ಕಚ್ಚಿದ ಪ್ರಕರಣಗಳು ನಡೆಯುತ್ತಿರುವಾಗ ನಾಯಿ ಹಾವಳಿಯನ್ನು ತಡೆಯಬೇಕಿದೆ. ಹೀಗಾಗಿ ನಾಯಿಗಳ ಕಚ್ಚುವಿಕೆಯಿಂದ ಪರಾರಿ ಆಗೋದು ಹೇಗೆ ಅನ್ನುವ ಪಾಠ ಮಾಡಿಸಬೇಕು ಎಂದು ಮೇಯರ್ ಗಂಗಾಂಬಿಕೆ ಹೇಳಿದ್ದಾರೆ.ಮೇಯರ್ ಗಂಗಾಂಬಿಕೆ ಮಾತು ಕೇಳಿ ಕೆಲವು ಸಂಘಟನೆಗಳ ಮೂಲಕ ಶಾಲಾ ಮಕ್ಕಳೊಂದಿಗೆ, ನಾಯಿ ಹಾವಳಿಯಿಂದ ಮರಣದಂತಹ ಪ್ರಕರಣಗಳು ನಡೆದಿರುವ ಬಡಾವಣೆಗಳಿಗೆ ಹೋಗಿ ಸಾರ್ವಜನಿಕರಿಗೆ ನಾಯಿಗಳೊಂದಿಗೆ ಹೇಗೆ ವರ್ತಿಸಬೇಕು ಎಂದು ಜಾಗೃತಿ ಮೂಡಿಸಲು ಚಿಂತಿಸಲಾಗಿದೆ.ನಾಯಿ ಹಾವಳಿ ನಿಯಂತ್ರಣಕ್ಕೆ ಬಿಬಿಎಂಪಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸುವ ಬದಲಿಗೆ ಮಕ್ಕಳಿಗೆ ಪಾಠ ಹೇಳುವುದಕ್ಕೆ ಮೇಯರ್ ಸಿದ್ಧವಾಗಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


