ಮಡಿಕೇರಿ: ನಾಡಹಬ್ಬ ಐತಿಹಾಸಿಕ ದಸರಾಕ್ಕೆ ಮಡಿಕೇರಿಯಲ್ಲಿ ಚಾಲನೆ ಸಿಕ್ಕಿದೆ. ನಗರದ ನಾಲ್ಕು ಶಕ್ತಿದೇವತೆಯ ಕರಗಗಳು ಸಾಂಪ್ರದಾಯಿಕವಾಗಿ ನಗರ ಪ್ರದಕ್ಷಿಣೆ ಆರಂಭಿಸಿವೆ. ಜಲಪ್ರಳಯ ಹಿನ್ನಲೆ ಇದೇ ಮೊದಲ ಬಾರಿಗೆ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಲಾಗ್ತಿದ್ದು, 10 ದಿನಗಳ ಕಾಲ ಅದ್ಧೂರಿಯಿಂದ ನಡೆಯುತ್ತಿದ್ದ ದಸರಾ ಆಚರಣೆ ಕಾರ್ಯಕ್ರಮಗಳು 2 ದಿನಗಳಿಗೆ ಸೀಮಿತವಾಗಿವೆ. ಅದ್ಧೂರಿ ಇಲ್ಲದಿದ್ರೂ ಸರಳ ಹಾಗೂ ಸಾಂಪ್ರದಾಯಿಕವಾಗಿ ಮಡಿಕೇರಿ ದಸರಾ ಕೊಡಗಿನಲ್ಲಿ ಆಚರಣೆಯಾಗುತ್ತಿದೆ.ಕೊಡಗು ಕೇವಲ ಟೂರಿಸ್ಟ್ ಹಾಟ್ ಸ್ಪಾಟ್ ಮಾತ್ರ ಅಲ್ಲ. ಕೊಡಗಿನ ಹಬ್ಬ ಹರಿದಿನ ಹಾಗೂ ಆಚರಣೆಗಳು ವಿಭಿನ್ನವಾಗಿದ್ದು ಎಲ್ಲರ ಗಮನ ಸೆಳೆಯುತ್ತವೆ. ಅದರಲ್ಲೂ ಮಡಿಕೇರಿ ದಸರಾ ಅಂತೂ ಕೊಡಗಿನ ಪಾಲಿಗೆ ಅದ್ಧೂರಿಯ ಹಬ್ಬದಾಚರಣೆ. ಬೃಹತ್ತಾದ ವೇದಿಕೆ, ದಶದಿನಗಳು ಮನಸೂರೆಗೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು, ದಶಮಂಟಪಗಳ ಶೋಭಾಯಾತ್ರೆ, ಡಿಜೆ ಸೌಂಡ್ಸ್, ಜನಸಾಗರ. ಇದು ಮಡಿಕೇರಿ ದಸರಾದ ಅದ್ಧೂರಿತನಕ್ಕೆ ಸಾಕ್ಷಿಯಾಗಿದ್ದವು.ಆದರೆ ಈ ಬಾರಿ ಮಡಿಕೇರಿಯ ಅದ್ಧೂರಿ ದಸರಾ ಆಚರಣೆಗೆ ಬ್ರೇಕ್ ಬಿದ್ದಿದೆ. ಪ್ರಾಕೃತಿಕ ವಿಕೋಪದಿಂದ ಕೊಡಗು ತತ್ತರಿಸಿರೋದರಿಂದ ಸರಳವಾಗಿ ಸಾಂಪ್ರದಾಯಿಕ ದಸರಾ ಆಚರಣೆಗೆ ದಸರಾ ಕಮೀಟಿ ಮುಂದಾಗಿದೆ. ಜಳಪ್ರಳಯದಿಂದ ಇಡೀ ಜಿಲ್ಲೆಯಲ್ಲೇ ಸೂತಕದ ಛಾಯೆ ಆವರಿಸಿದ್ದು, ಜನರು ಸಂಕಷ್ಟದಲ್ಲಿ ಕೈ ತೊಳೆಯುತ್ತಿದ್ದಾರೆ. ಈ ವೇಳೆ ಅದ್ಧೂರಿ ದಸರಾ ಆಚರಣೆ ಮುಂದಾಗದೇ ಸರಳವಾಗಿ ಆಚರಿಸುತ್ತಿದ್ದೇವೆ ಎಂದು ದಸರಾ ಸಮಿತಿ ಕಾರ್ಯಧ್ಯಕ್ಷ ಮಹೇಶ್ ಜೈನ್ ತಿಳಿಸಿದ್ದಾರೆ.ಮಡಿಕೇರಿ ದಸರಾ ಆಚರಣೆಯ ಕಾರ್ಯಕ್ರಮಗಳನ್ನು 10 ದಿನಗಳ ಬದಲಾಗಿ 2 ದಿನಕ್ಕೆ ಸೀಮಿತಗೊಳಿಸಲಾಗಿದೆ. ಸರ್ಕಾರದಿಂದ 50 ಲಕ್ಷ ಅನುದಾನ ಸಿಕ್ಕಿದ್ದು, ಅದರಲ್ಲೇ ದಸರಾ ಆಚರಣೆ ನಡೆಯುತ್ತಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಪ್ರದಕ್ಷಿಣೆ ನಡೆಸುತ್ತಿವೆ. ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ವಿಜಯದಶಮಿಯ ಪ್ರಮುಖ ಆಕರ್ಷಣೆಯಾಗಿದ್ದ ದಶಮಂಟಪಗಳ ಶೋಭಾಯಾತ್ರೆಯನ್ನು ಸರಳವಾಗಿ ಮಾಡಲು ತಯಾರಿ ನಡೆಯುತ್ತಿದೆ. ಮೈಸೂರು ದಸರಾ ಬಿಟ್ಟರೆ ಮಡಿಕೇರಿ ದಸರಾ ಸೂಪರ್ ಎಂದು ಹೇಳುತ್ತಿದ್ದ ಮಂದಿ ಇದೀಗ ಸರಳ ದಸರಾ ಆಚರಣೆ ಆಗುತ್ತಿರುವುದನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಪ್ರಾಕೃತಿಕ ವಿಕೋಪದ ಸೂತಕದ ಛಾಯೆಯಿಂದ ಕೊಡಗು ಜನರು ನಿಧಾನವಾಗಿ ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ. ಅದ್ಧೂರಿ ಹಾಗೂ ವಿಭಿನ್ನವಾಗಿ ದಸರಾ ಆಚರಿಸುವ ಮೂಲಕ ಗಮನ ಸೆಳೆಯುತ್ತಿದ್ದ ಮಡಿಕೇರಿ ದಸರಾ ಇದೇ ಮೊದಲ ಬಾರಿಗೆ ಸರಳವಾಗಿ ಆಚರಣೆ ಆಗುತ್ತಿರುವುದಿಂದ ಜನಸಾಮಾನ್ಯರಿಗೆ ನಿರಾಸೆ ಉಂಟು ಮಾಡಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


