ಹುಬ್ಬಳ್ಳಿ: ಪ್ರಾಣಭಯದಿಂದ ಪತ್ನಿ ವಿರುದ್ಧವೇ ಹುಬ್ಬಳ್ಳಿಯ ಖ್ಯಾತ ವೈದ್ಯ, ರಾಜಕಾರಣಿ ಡಾ. ಕ್ರಾಂತಿಕಿರಣ್ ದೂರು ನೀಡಿದ್ದಾರೆ.ಪತಿಯ ಎದುರಲ್ಲೇ ಪ್ರಿಯಕರ ಕಿರಣ್ ಕುಲಕರ್ಣಿನೊಂದಿಗೆ ಪತ್ನಿ ಫೋನಿನಲ್ಲಿ ಮಾತನಾಡಲು ಶುರು ಮಾಡಿದ್ದಾಳೆ. ಇದರಿಂದ ಕೋಪಗೊಂಡ ವೈದ್ಯ ಕ್ರಾಂತಿಕಿರಣ್ ಪ್ರಶ್ನೆ ಮಾಡಿದ್ದಾರೆ. ಪರಿಣಾಮ ಪತ್ನಿ ಶೋಭಾ, ಪ್ರಿಯಕರನ ಜೊತೆ ಸೇರಿ ಕೊಲೆ ಬೇದರಿಕೆ ಹಾಕಿದ್ದಾಳೆ. ಹೀಗಾಗಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರ ಕಿರಣ್ ಕುಲಕರ್ಣಿ ವಿರುದ್ಧ ಕ್ರಾಂತಿಕಿರಣ್ ಅವರು ಪ್ರಕರಣ ದಾಖಲಿಸಿದ್ದಾರೆ.ಕಿರಣ್ ಕುಲಕರ್ಣಿಕಳೆದ 18 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಈ ಸುಂದರ ಜೋಡಿ ವೈದ್ಯರಾದ ಮೇಲೆ ಹುಬ್ಬಳ್ಳಿಗೆ ಬಂದು ನೆಲೆಸಿತ್ತು. ಅಲ್ಲದೆ ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮೊದಲು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದ್ದ ಇಬ್ಬರೂ, ಬಳಿಕ ಅಲ್ಲಿಂದ ಹೊರಬಂದು ಖಾಸಗಿ ನರ್ಸಿಂಗ್ ಹೋಂ ತೆರೆದಿದ್ದರು.ಉತ್ತರ ಕರ್ನಾಟಕ ಭಾಗದ ಖ್ಯಾತ ನ್ಯೂರೋಲಜಿಸ್ಟ್ ಆಗಿ ಬೆಳೆದಿದ್ದ ಕ್ರಾಂತಿಕಿರಣ್, ಇತ್ತಿಚಿಗೆ ವೈದ್ಯಕೀಯ ವೃತ್ತಿ ಜೊತೆಗೆ ರಾಜಕೀಯಕ್ಕೂ ಪ್ರವೇಶ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೂಡಾ ಆಗಿದ್ದರು. ಆದರೆ ಕೊನೆಘಳಿಗೆಯಲ್ಲಿ ಪಕ್ಷ ಟಿಕೆಟ್ ನಿರಾಕರಿಸಿತ್ತು. ಸದ್ಯ ತನ್ನ ವೈಯಕ್ತಿಕ ಜೀವನದಿಂದ ಹತಾಶಾರಾದ ವೈದ್ಯ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಸದ್ಯ ಪೊಲೀಸರು ಕೂಡಾ ಐಪಿಸಿ ಸೆಕ್ಷನ್ 504, 506 ಮತ್ತು 323 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪತ್ನಿ ಹಾಗೂ ಪ್ರಿಯಕರನನ್ನು ಕರೆಸಿ ವಿಚಾರಣೆ ಮಾಡುತ್ತಿದ್ದಾರೆ. ಅಲ್ಲದೇ ಡಾ. ಕ್ರಾಂತಿ ಕಿರಣ್ ಅವರು ತನಗೆ ಸೂಕ್ತ ಭದ್ರತೆ ನೀಡಿ ಅಂತ ಹೇಳುತ್ತಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಡಿಸಿಪಿ ಬಿ.ಎಸ್ ನೇಮಗೌಡ ತಿಳಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


