ಹಾವೇರಿ: ಖಾಸಗಿ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಚಿಕಿತ್ಸೆಗೆ ಎಂದು ಬಂದಿದ್ದ ರೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆ ಶಿಗ್ಗಾಂವಿಯ ಪಟ್ಟಣದಲ್ಲಿ ನಡೆದಿದೆ.ಸದ್ದಾಂ ಹರಕುಣಿ(25) ಮೃತ ಯುವಕ. ಮೃತ ಸದ್ದಾಂ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ನಿವಾಸಿ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಮೂಳೆ ಮುರಿತಕ್ಕೆ ಒಳಗಾಗಿದ್ದ ಸದ್ದಾಂಗೆ ಕಾಲಲ್ಲಿ ರಾಡ್ ಹಾಕಲಾಗಿತ್ತು. ಸೋಮವಾರ ಸಂಜೆ ಶಿಗ್ಗಾಂವಿ ಪಟ್ಟಣದ ರಾಣಿ ಆಸ್ಪತ್ರೆಗೆ ಸದ್ದಾಂ ರಾಡ್ ತೆಗೆಸಲು ಬಂದಿದ್ದ ಎನ್ನಲಾಗಿದೆ.ರಾಣಿ ಆಸ್ಪತ್ರೆಯಿಂದ ಸದ್ದಾಂನನ್ನ ಪಟ್ಟಣದ ತೋಟಗೇರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಸದ್ದಾಂ ಅಷ್ಟೆರಲ್ಲಿಯೇ ಮೃತಪಟ್ಟಿದ್ದಾನೆ ಎಂದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೇಳಿದ್ದಾರೆ. ನಂತರ ಅಲ್ಲಿಂದ ಮೃತದೇಹವನ್ನ ತೋಟಗೇರ ಆಸ್ಪತ್ರೆಯಿಂದ ಕಾರಡಗಿ ಗ್ರಾಮಕ್ಕೆ ಅಂಬುಲೆನ್ಸ್ ಮೂಲಕ ಕಳಿಸಲಾಗಿತ್ತು.ಇತ್ತ ಸದ್ದಾಂ ಮೃತದೇಹ ಕಂಡ ಸಂಬಂಧಿಕರು ಮರಳಿ ಮೃತದೇಹವನ್ನ ಶಿಗ್ಗಾಂವಿ ಪೊಲೀಸ್ ಠಾಣೆ ಬಳಿ ತಂದು ಘಟನೆಗೆ ರಾಣಿ ಅಥವಾ ತೋಟಗೇರ ಆಸ್ಪತ್ರೆ ವೈದ್ಯರು ಕಾರಣ ಅಂತ ಮೃತನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕ ಸಾವಿಗೆ ಶಿಗ್ಗಾಂವಿಯ ರಾಣಿಯ ಆಸ್ಪತ್ರೆಯ ವೈದ್ಯರು ಕಾರಣ ಎಂದು ತಿಳಿದು ಅವರ ವಿರುದ್ಧ ಮೃತ ಸದ್ದಾಂ ಸಂಬಂಧಿಕರು ದೂರು ದಾಖಲು ಮಾಡಿದ್ದಾರೆ.ಈ ಕುರಿತು ಸೂಕ್ತವಾದ ತನಿಖೆ ಮಾಡಿ ತಪ್ಪಿದಸ್ತರಿಗೆ ಶಿಕ್ಷೆಯಾಗಬೇಕು. ಯುವಕನ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


