ಮೈಸೂರು: ಮಹತ್ಮಾ ಗಾಂಧೀಜಿ ಅವರ ಜನ್ಮದಿನವಾದ ಹಿನ್ನೆಲೆಯಲ್ಲಿ ಇಂದು ದಸರಾ ಗಜಪಡೆಗಳಿಗೆ ಭಾರವಿಲ್ಲದೆ ತಾಲೀಮು ನಡೆಸಲಾಗುತ್ತಿದೆ.ಗಾಂಧಿ ಜಯಂತಿ ಆದ್ದರಿಂದ ಭಾರ ಹೊರಿಸದೆ ಆನೆಗಳು ಬರಿ ಮೈಯಲ್ಲಿ ತಾಲೀಮು ನಡೆಸಿದವು. ಈವರೆಗೂ 400 ರಿಂದ 500 ಕೆಜಿ ತೂಕದ ಭಾರ ಹೊತ್ತು ತಾಲೀಮು ನಡೆಸುತ್ತಿದ್ದ ಆನೆಗಳು, ಇಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಹಿಂಸೆ ದೃಷ್ಟಿಯಿಂದ ಆನೆಗೆ ಭಾರ ಹೊರಿಸದೆ ತಾಲೀಮು ನಡೆಸಲಾಗುತ್ತಿದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಗಾಂಧಿ ಜಯಂತಿ ಇದ್ದರೆ ಭಾರವಿಲ್ಲದೆ ತಾಲೀಮು ನೀಡುವ ಅಧಿಕಾರಿಗಳು, ಗಾಂಧೀಜಿಗೆ ಗೌರವ ಸಲ್ಲಿಸುವ ಸಲುವಾಗಿ ಖಾಲಿ ಮೈಯಲ್ಲಿ ಭಾರವಿಲ್ಲದೆ ಅರಮನೆಯಿಂದ ಬನ್ನಿಮಂಟಪದವರೆಗೆ ಆನೆಗಳು ಸಾಗಿದವು.ಈ ಮೊದಲು ಧನಂಜಯ ಆನೆಗೆ ಭಾರ ಹೊರುವ ತಾಲೀಮು ನೀಡಲಾಗಿತ್ತು. ಧನಂಜಯನ ಬೆನ್ನಿಗೆ ಸುಮಾರು 300 ಕೆ.ಜಿ. ತೂಕದ ಭಾರವನ್ನು ಹೊರಿಸಲಾಗುತ್ತಿತ್ತು. ಅರ್ಜುನ ಆನೆಗೂ ಮರಳು ಮೂಟೆ ಹೊತ್ತುಕೊಟ್ಟು ತಾಲೀಮು ನಡೆಸಲಾಗಿತ್ತು. ಅರಣ್ಯ ಇಲಾಖೆ ಅಂಬಾರಿ ಹೊರಲು ಅರ್ಜುನ, ಧನಂಜಯ, ಬಲರಾಮನಿಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದರು.ತಾಲೀಮು ಏಕೆ?
ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


