ಮೈಸೂರು: ಫೇಸ್‍ಬುಕ್ ನಲ್ಲಿ ಸಮಾಜ ಸೇವಕಿವೊಬ್ಬರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಖಾಸಗಿ ಕಂಪೆನಿ ನೌಕರನನ್ನು ಮೈಸೂರಿನ ಕೆ.ಆರ್. ಠಾಣಾ ಪೊಲೀಸರು ಬಂಧಿಸಿದ್ದಾರೆ.ಹೂಟಗಳ್ಳಿ ಕೈಗಾರಿಕಾ ಬಡಾವಣೆಯ ಡೆಟಾಲ್ ಕಂಪೆನಿಯ ನೌಕರ ರವಿ.ಕೆ.ಗೌಡ ಬಂಧಿತ ಆರೋಪಿ. ರವಿ ಮೂಲತಃ ಹುಣಸೂರು ತಾಲೂಕಿನ ಕಲ್ಕುಣಿಕೆ ಗ್ರಾಮದವನಾಗಿದ್ದು, ಮೈಸೂರಿನ ಹೊಸಬಂಡೀಕೇರಿಯ ಹಾಗೂ ಸಮಾಜಸೇವಕಿಯಾಗಿರುವ ಚೈತ್ರ ಎಂಬ ಯುವತಿಗೆ ಫೇಸ್ ಬುಕ್‍ನಲ್ಲಿ ಅಶ್ಲೀಲ ಪದಗಳನ್ನು ಬಳಸಿ ಚಾಟ್ ಮಾಡಿದ್ದಾನೆ. ಈ ಮೊದಲು ರವಿ ಹಾಗೂ ಚೈತ್ರ ಒಂದೂವರೆ ವರ್ಷದಿಂದ ಫೇಸ್ ಬುಕ್ ನಲ್ಲಿ ಪರಿಚಿತರಾಗಿದ್ದರು.ಕೆಲ ದಿನಗಳ ಹಿಂದೆ ಚೈತ್ರ ಹಾಕಿದ ಪೋಸ್ಟ್ ಒಂದಕ್ಕೆ ರವಿ ಗೌಡ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ. ಅಲ್ಲಿಂದ ಶುರುವಾದ ಇಬ್ಬರ ಸಂಭಾಷಣೆ ಹಾದಿ ತಪ್ಪಿದ್ದು, ಚೈತ್ರಾಗೆ ಅಶ್ಲೀಲವಾಗಿ ಕಮೆಂಟ್‍ಗಳನ್ನು ಹಾಕಿದ್ದಾನೆ. ಇದರಿಂದ ನೊಂದ ಯುವತಿ ನಗರದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಸಭ್ಯವಾಗಿ ಯುವತಿಯೊಂದಿಗೆ ಜಾಲತಾಣಗಳಲ್ಲಿ ವರ್ತಿಸಿದ ಹಿನ್ನೆಲೆಯಲ್ಲಿ ರವಿ ಗೌಡನನ್ನು ಬಂಧಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


