ಉಡುಪಿ: ನಿಮಗೆ ವಿಚಿತ್ರ ಅನ್ನಿಸಿದರು ನಾವೀಗ ಹೇಳುತ್ತಿರುವ ಇರುವ ಸುದ್ದಿ ಸತ್ಯ. ದೇವರು, ದೈವವೆಲ್ಲಾ ಸುಳ್ಳು ಅಂತ ಹೇಳುವ ಮಂದಿ ಕೂಡಾ ಈ ಸುದ್ದಿಯನ್ನು ಓದಬೇಕು.ಅಷ್ಟಮಿ, ಗಣೇಶೋತ್ಸವ ಹೀಗೆ ವಿಶೇಷ ಹಬ್ಬದ ವೇಳೆ ಕರಾವಳಿಯಲ್ಲಿ ಹುಲಿ ವೇಷದ ಕುಣಿತವಿರುತ್ತದೆ. ಯುವಕರ ಗುಂಪುಗಳು ಹುಲಿವೇಷ ಹಾಕಿ ಕುಣಿದು ಸೇವೆ ನೀಡುತ್ತಾರೆ, ಹಣ ಸಂಪಾದನೆ ಮಾಡುತ್ತಾರೆ. ಮೊನ್ನೆ ಆರಂಭವಾದ ಗಣೇಶೋತ್ಸವದ ಸಂಭ್ರಮ ಇನ್ನೂ ಮುಂದುವರಿದಿದ್ದು, ಉಡುಪಿಯ ತೆಂಕ ನಿಡಿಯೂರು ವೀರಾಂಜನೇಯ ವ್ಯಾಯಾಮ ಶಾಲೆಯ ಬಳಿ 25 ಯುವಕರು ಹುಲಿವೇಷಕ್ಕೆ ಬಣ್ಣ ಹಚ್ಚಿದ್ದರು. ಈ ತಂಡ ಹಲವು ವರುಷಗಳಿಂದ ಹುಲಿವೇಷ ಧರಿಸಿ ಕುಣಿಯುವುದನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದೆ. ಕುಣಿಯುತ್ತಾ ಕುಣಿಯುತ್ತಾ ಈ ಬಾರಿ ಇಬ್ಬರು ಹುಲಿವೇಷ ಧಾರಿಗಳಿಗೆ ಏಕಾಯೇಕಿ ಆವೇಶ ಬಂದಿದೆ. ಸಂದೀಪ್ ಹಾಗೂ ಹರೀಶ್ ವಿಚಿತ್ರವಾಗಿ ವರ್ತಿಸಿದ್ದಾರೆ. ಎಲ್ಲೆಂದರಲ್ಲಿ ಓಡಲು ಯತ್ನಿಸಿದ್ದಾರೆ. ಹುಲಿ ಬಿಡುವ ಮುಹೂರ್ತ ಪೂಜೆಯ ವೇಳೆ ಯಾವುದೇ ಶಕ್ತಿಯೊಂದು ಮೈಮೇಲೆ ಅವೇಶ ಗೊಂಡಂತೆ ಭಾಸವಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಈ ಕ್ಷಣಗಳು ವೈರಲ್ ಅಗಿದೆ. ಶ್ರದ್ಧೆ ಭಕ್ತಿ ಯಿಂದ ಹುಲಿವೇಷ ಧರಿಸಿದರೆ ಅವೇಶ ಬರುತ್ತೆ ಅನ್ನುವುದು ಜನ ಸಾಮಾನ್ಯರ ನಂಬಿಕೆ. ಹುಲಿವೇಷ ಹಾಕುವುದು ಕೇವಲ ಹೊಟ್ಟೆಪಾಡಿಗೆ ಅಥವಾ ಮನೋರಂಜನೆಗಲ್ಲ ಈ ವೀಷಯದ ಹಿಂದೆ ದೈವಿಕ ಆಚರಣೆ ಇದೆ. ಉಪವಾಸ ಮಾಡಿ, ಹರಕೆ ಹೊತ್ತು ಶೃದ್ಧೆಯಿಂದ ಹುಲಿವೇಷ ಧರಿಸಿದವರಿಗೆ ಆವೇಶ ಬರುತ್ತದೆ ಎಂದು ಹಿಂದಿನವರು ಹೇಳುತ್ತಾರೆ.ನಮಗೆ ಕೆಲವು ನಿಮಿಷ ಏನಾಗಿದೆ ಎಂಬೂದೇ ಗೊತ್ತಾಗಲಿಲ್ಲ. ವಿಚಿತ್ರ ಶಕ್ತಿ ಆವರಿಸಿದಂತಾಗಿದೆ. ಕೆಲ ಕಾಲದ ನಂತರ ಸಹಜ ಸ್ಥಿತಿಗೆ ಬಂದಿದ್ದೇವೆ. ಆಮೇಲೆ ಬಹಳ ಸುಸ್ತಾದಂತಾಗಿತ್ತು ಎಂದು ಯುವಕರಿಬ್ಬರು ಪತ್ರಿಕ್ರಿಯಿಸಿದ್ದಾರೆ.ತುಳುನಾಡಿನಲ್ಲಿ ವೇಷ ತೊಡುವುದು ಒಂದು ಸಂಪ್ರದಾಯ. ದೇವಿಗೆ ಹರಕೆ ಹೇಳಿ ಹುಲಿವೇಷವನ್ನು ಹಾಕುವವರಿದ್ದಾರೆ. ಮಾಂಸಾಹಾರ ತ್ಯಜಿಸಿ, ಬಹಳ ಶುದ್ಧತೆಯಲ್ಲಿ ಮಾನಸಿಕವಾಗಿ ಸಿದ್ಧವಾಗಿ ಹುಲಿವೇಷ ಹಾಕುವ ಯುವಕರನ್ನೂ ಉಡುಪಿ, ದಕ್ಷಿಣ ಕನ್ನಡದಲ್ಲಿ ಕಾಣುತ್ತೇವೆ. ಹುಲಿ ದೇವಿಯ ವಾಹನವಾಗಿರುವುದರಿಂದ ದೈವೀ ಶಕ್ತಿ ಆವಾಹನೆಯಾಗುತ್ತದೆ. ತೆಂಕ ನಿಡಿಯೂರಿನಲ್ಲಿ ಹುಲಿ ನರ್ತನ ಸೇವೆಗೆ ಮುನ್ನ ಧೂಪಹಾಕುವ ಸಂದರ್ಭ ಯುವಕರಲ್ಲಿ ಆವೇಶವಾಗಿದೆ. ಆಮೇಲೆ ತೀರ್ಥ ಪ್ರಸಾದ ಕೊಟ್ಟ ನಂತರ ಹುಲಿವೇಷಧಾರಿಗಳು ಆವೇಷ ಮುಕ್ತರಾಗಿದ್ದಾರೆ ಎಂದು ಧಾರ್ಮಿಕ ತಜ್ಞ ಶ್ರೀಕಾಂತ್ ಶೆಟ್ಟಿ ಹೇಳುತ್ತಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


