ಹಾಸನ: ಭಾರೀ ಮಳೆಯಿಂದಾದ ಗುಡ್ಡ ಕುಸಿತಗಳಂತಹ ಆತಂಕದ ನಂತರ ಈಗ ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ಭೂಕಂಪದ ಅನುಭವವಾಗಿದೆ.ಭಾನುವಾರ ರಾತ್ರಿ 7ರಿಂದ 8 ಗಂಟೆಯ ನಡುವೆ ಎರೆಡು ಭಾರಿ ಭೂಕಂಪನವಾದ ಅನುಭವವನ್ನು ಸಾರ್ವಜನಿಕರು ತಹಶೀಲ್ದಾರರ ಬಳಿ ಹಂಚಿಕೊಂಡಿದ್ದಾರೆ. ಭೂಕಂಪನದ ಪರಿಣಾಮವಾಗಿ ಮನೆಯ ಅಡುಗೆ ಮನೆಯಲ್ಲಿ ಪಾತ್ರೆಗಳು ಅಲ್ಲಾಡುವ ಶಬ್ಧವನ್ನು ಕೇಳಿದ ಸಾರ್ವಜನಿಕರು ತಾಲೂಕು ಆಡಳಿತಕ್ಕೆ ವಿಷಯ ಮುಟ್ಟಿಸಿದ್ದಾರೆ.ಪಟ್ಟಣದ ರಾಜಪ್ಪ ಬಡಾವಣೆ, ಹಳೇಸಂತೆ ಬೀದಿ, ದೊಡ್ಡಬೀದಿ, ಬಿಎಂರಸ್ತೆ, ಆಶಾ ಬಡಾವಣೆ ಸೇರಿದಂತೆ ಹಲವೆಡೆ ಭೂಕಂಪನ ಅನುಭವಕ್ಕೆ ಬಂದಿದೆ. ಎರಡು ಭಾರಿ ಭೂಕಂಪನದ ಅನುಭವವಾಗಿದ್ದು ಸಂಬಂದಿಸಿದ ಅಧಿಕಾರಿಗಳು ಇನ್ನಷ್ಟೆ ಸ್ಪಷ್ಟನೆ ನೀಡಬೇಕಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


