ಉಡುಪಿ: ನಗರದ ಎರಡು ಕಡೆ ಮತಯಂತ್ರ ಕೈಕೊಟ್ಟಿದ್ದರೂ, ಮತದಾನದ ಅವಧಿಯನ್ನು ವಿಸ್ತರಿಸದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೊಡವೂರಿನ ಎರಡು ಮತಯಂತ್ರಗಳು ಕೈಕೊಟ್ಟ ಪರಿಣಾಮ, ಎರಡು ಗಂಟೆ ಮತದಾನ ಸ್ಥಗಿತವಾಗಿತ್ತು. ಆದರೆ ಜಿಲ್ಲಾಡಳಿತ 2 ಗಂಟೆಗಳ ಅವಧಿಯನ್ನು ವಿಸ್ತರಣೆ ಮಾಡದೇ, 5 ಗಂಟೆಗೆ ಮತದಾನ ಮುಕ್ತಾಯವಾಗುತ್ತದೆ ಎಂದು ತಿಳಿಸಿದೆ.ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನಗೊಂಡ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಕೊಡವೂರಿನ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿ, ಮತಯಂತ್ರದ ದೋಷದಿಂದ ಎರಡು ಗಂಟೆ ಮತದಾನ ವಿಳಂಬವಾಗಿದೆ. ಹೀಗಾಗಿ ಹೆಚ್ಚುವರಿ 2 ಗಂಟೆಗಳ ಮತದಾನಕ್ಕೆ ಜಿಲ್ಲಾಡಳಿತ ಅವಕಾಶಮಾಡಿಕೊಡಬೇಕು. ಒಂದೊಂದು ಮತವೂ ಅಮೂಲ್ಯವಾಗಿದೆ ಎಂದು ಹೇಳಿದರು.ಕಳೆದ ಬಾರಿಯೂ ಮತಗಟ್ಟೆಯಲ್ಲಿ ಮತಯಂತ್ರ ಕೆಟ್ಟಿತ್ತು. ಅಧಿಕಾರಿಗಳಿಗೆ ಚುನಾವಣೆ ಬಗ್ಗೆ ಗಂಭೀರತೆ ಇಲ್ಲ. ನಮ್ಮೂರಿನಿಂದ ಮದುವೆಗೆ ಹೊರಟ 60 ಜನ ವೋಟ್ ಹಾಕಲು ಬಂದಿದ್ದರು. ಮತಯಂತ್ರ ಕೆಟ್ಟಿದ್ದಕ್ಕೆ ಅವರು ವಾಪಾಸ್ಸು ಹೋದರು ಮತ್ತೆ ಅವರು ಬರುವುದಿಲ್ಲವೆಂದು ಬಿಜೆಪಿ ಅಭ್ಯರ್ಥಿ ವಿಜಯ್ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಎರಡು ಕಡೆ ಮತಯಂತ್ರ ದೋಷ ಕಂಡುಬಂದಿದೆ. ಈಗಾಗಲೇ ನಮ್ಮ ಸಿಬ್ಬಂದಿ ದೋಷ ಸರಿಪಡಿಸಿದ್ದಾರೆ. ಅಲ್ಲದೇ ಬೇರೆ ಮತಯಂತ್ರವನ್ನು ಹಾಕಿದ್ದಾರೆ. ಎರಡು ಮತಗಟ್ಟೆಗಳಲ್ಲಿ ಟೋಕನ್ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಮತದಾರರು 5 ಗಂಟೆಯ ಒಳಗೆ ಟೋಕನ್ ಪಡೆದುಕೊಳ್ಳಬೇಕು. ಟೋಕನ್ ಪಡೆದುಕೊಂಡ ಮತದಾರರಿಗೆ ಮತದಾನಕ್ಕೆ ಅವಕಾಶಮಾಡಿಕೊಡುತ್ತೇವೆ. ಯಾವುದೇ ಕಾರಣಕ್ಕೂ ಮತದಾನದ ಅವಧಿಯನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಮತದಾನ ಮಾಡುವುದು ಎಲ್ಲರ ಹಕ್ಕು ಮತ್ತು ಕರ್ತವ್ಯ. ಮತಯಂತ್ರ ದೋಷದಿಂದಾಗಿ ಉಂಟಾದ ಸಮಸ್ಯೆಗೆ ಮತದಾರರು ಸಹಕರಿಸಬೇಕೆಂದು ವಿನಂತಿಸಿಕೊಂಡರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


