ಕಲಬುರಗಿ: ನವ ವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ನಡೆದಿದೆ.24 ವರ್ಷದ ಪುಷ್ಪಾ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ನವವಿವಾಹಿತೆ. ಎರಡು ತಿಂಗಳ ಹಿಂದೆ ಕಮಲಾಪುರ ಪಟ್ಟಣದ ನಿವಾಸಿ ಬಾಬುರಾವ್ ಎಂಬವರ ಜೊತೆ ಹಾಪುರ ತಾಲೂಕಿನ ಸಗರ್ ಗ್ರಾಮದ ನಿವಾಸಿ ಪುಷ್ಪಾರ ಮದುವೆ ಆಗಿತ್ತು. ಪುಷ್ಪಾರ ಶವವನ್ನು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಇರಿಸಿದ ಅತ್ತೆ ಕಮಲಾಬಾಯಿ ಮತ್ತು ಪತಿ ಸ್ಥಳದಿಂದ ಪರಾರಿಯಾಗಿದ್ದಾರೆ.ಮಗಳ ಸಾವಿನ ಸುದ್ದಿ ಸ್ಥಳಕ್ಕಾಗಮಿಸಿದ ಪುಷ್ಪಾ ಪೋಷಕರು ಕೊಲೆ ಅಂತಾ ಆರೋಪಿಸಿದ್ದಾರೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


