ತುಮಕೂರು: ಮದುವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು ಕಂಡು ಬಂದಿದ್ದರಿಂದ ಮದುವೆ ಬಂದ ಅತಿಥಿಗಳು ಹೌಹಾರಿದ ಘಟನೆ ನಡೆದಿದೆ.ತುಮಕೂರು ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯುತಿತ್ತು. ಇಲ್ಲಿ ಬ್ಲೂ ಬ್ರೀಜ್ ಹೆಸರಿನ ನೀರಿನ ಬಾಟಲನ್ನು ತರಿಸಲಾಗಿತ್ತು. ಅದರಲ್ಲಿ 7 ಬಾಕ್ಸನಲ್ಲಿರುವ ಬಾಟಲ್ ಗಳಲ್ಲಿ ಕಸಕಡ್ಡಿಗಳು ಕಂಡು ಬಂದಿದೆ.ನೂರಾರು ಅಥಿತಿಗಳು ಅರಿವಿಗೆ ಬಾರದೇ ಈ ನೀರನ್ನು ಕುಡಿದಿದ್ದು ಕಾಯಿಲೆ ಬರುವ ಆತಂಕದಲ್ಲಿದ್ದಾರೆ. ಶೈಲಾ ಇಂಡಸ್ಟ್ರೀಸ್ ಗೆ ಸೇರಿದ ನೀರಿನ ಬಾಟಲ್ ಇದಾಗಿದ್ದು ತುಮಕೂರಿನ ರಂಗಾಪುರ ಕೈಗಾರಿಕಾ ಪ್ರದೇಶದಲ್ಲಿ ತಯಾರು ಮಾಡಲಾಗುತ್ತಿದೆ. ತಯಾರಿಕಾ ಘಟಕದಲ್ಲಿ ಮುಂಜಾಗೃತೆ ವಹಿಸದೇ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಕಂಪೆನಿ ವಿರುದ್ಧ ದೂರು ನೀಡಲು ಗ್ರಾಹಕರು ಮುಂದಾಗಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


