ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಬಳಿ ಕುರಿ ಮೇಯಿಸಲು ಹೋಗಿ ಕೃಷ್ಣಾ ನದಿ ನಡುಗಡ್ಡೆಯಲ್ಲಿ ಕೆಲವರು ಸಿಲುಕಿಕೊಂಡಿದ್ದರು. ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿಗಳು ಹಾಗೂ ಕುರಿಗಳ ರಕ್ಷಣಾ ಕಾರ್ಯ ಇಂದು ಆರಂಭವಾಗಿದೆ.ಅಗ್ನಿಶಾಮಕ ದಳದ ಜಿಲ್ಲಾ ಮಟ್ಟದ ಅಧಿಕಾರಿ ರವೀಂದ್ರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಬುಧವಾರ ಬೆಳಗ್ಗೆ ಕುರಿ ಮೇಯಿಸಲು ನದಿ ದಾಟಿ ಹೋಗಿದ್ದ ಚಿಂಚೊಡಿ ಗ್ರಾಮದ ಮುದೇಪ್ಪ, ಮಲ್ಲಪ್ಪ, ಹುಸೇನಪ್ಪ, ಸಿದ್ದಪ್ಪ ಸೇರಿ 6 ಜನ ನಡುಗಡ್ಡೆಯಲ್ಲಿದ್ದಾರೆ. 200 ಕುರಿಗಳನ್ನ ನಡುಗಡ್ಡೆಯಿಂದ ಹೊರಗೆ ಕರೆತರುವುದೇ ಸಿಬ್ಬಂದಿಗಳಿಗೆ ಸವಾಲಾಗಿದೆ.ದಿಢೀರನೇ ಕೃಷ್ಣಾ ನದಿಗೆ 1 ಲಕ್ಷ 5 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಟ್ಟ ಹಿನ್ನೆಲೆ ಕುರಿಗಾಹಿಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದರು. ನಡುಗಡ್ಡೆ ವಿಶಾಲವಾಗಿರುವುದರಿಂದ ಯಾವುದೇ ಅಪಾಯವಿಲ್ಲ. ಮೇಕ್ಯಾನಿಸಂ ಬೋಟ್ ಮೂಲಕ ರಕ್ಷಣಾ ಕಾರ್ಯಚರಣೆ ಆರಂಭಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


