ಬೆಂಗಳೂರು: ಗ್ರಾಮದಲ್ಲಿ ಎರಡು ವರ್ಷದ ಹಿಂದೆ ಒಂದು ಕೋತಿಯೊಂದು ಸಾಕ್ಷಾತ್ ಹನುಮನ ರೀತಿಯಲ್ಲಿ ಎಂಟ್ರಿ ಕೊಟ್ಟಿತ್ತು. ಊರಿನ ಮಗನಾಗಿ ಬೆಳದಿದ್ದ ಮಂಗ, ಕಳೆದ ಎರಡು ತಿಂಗಳಿಂದ ಗ್ರಾಮದಲ್ಲಿ ತನ್ನ ಉಪಟಳ ಆರಂಭಿಸಿದೆ.ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಮಂಟನಕುರ್ಚಿ ಗ್ರಾಮದ ಗ್ರಾಮಸ್ಥರು ಕೋತಿಯ ಉಪಟಳದಿಂದ ಬೇಸತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಮಕ್ಕಳು ಮಂದಿಯನ್ನದೆ ಸಾಕು ಪ್ರಾಣಿಗಳ ಮೇಲೆರಗಿ ಹಿಂಸೆ ಕೊಡ ತೊಡಗಿದೆ. ಇದೀಗ ನಾಯಿ, ಕೋಳಿ ಕುರಿ, ಬೆಕ್ಕುಗಳ ಮೇಲೆ ದಾಳಿ ನಡೆಸುವಷ್ಟು ಉಗ್ರ ರೂಪಿಯಾಗಿದೆ.ಇತ್ತೀಚೆಗೆ ಹೂತಿಟ್ಟ ಮೇಕೆ ಮೃತದೇಹವನ್ನ ಊರಿಗೆ ತಂದು ಭಕ್ಷಿಸಿದೆ. ಒಟ್ಟಾರೆ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿರುವ ಈ ಗ್ರಾಮದ ಕೋತಿಯ ಕಾಟ ತಪ್ಪಿದರೆ ಸಾಕು ಎಂದು ಗ್ರಾಮಸ್ಥರು ಹೇಳ್ತಿದ್ದಾರೆ. ದಿನೇ ದಿನೇ ನಾಯಿ ಮರಿಗಳನ್ನ ತಿನ್ನಲು ಯತ್ನಿಸಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕೋತಿಯನ್ನ ಹಿಡಿದು ಕಾಡಿಗೆ ಸಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


