ನೆಲಮಂಗಲ: ಜಾನುವಾರುಗಳು ಇಲ್ಲದ ಕಾರಣ ರೈತರೊಬ್ಬರು ಬೇಸಾಯಕ್ಕಾಗಿ ಗೋವುಗಳಂತೆ ಪತ್ನಿ ಮತ್ತು ಮಗನನ್ನು ಬಳಸಿಕೊಂಡಿದ್ದಾರೆ.ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನ ರೈತ ಆನಂದ್ ಅವರಿಗೆ ರಾಗಿ ಬೆಳೆಯನ್ನು ಬೆಳೆಯಲು, ಹಾಗೂ ಕುಂಟೆ ಹೊಡೆಯಲು ಗೋವುಗಳಿಲ್ಲದೇ ಕಂಗಾಲಾಗಿದ್ದಾರೆ. ಹಾಗಾಗಿ ತನ್ನ ಪತ್ನಿ ಹಾಗೂ ಮಗನ ಸಹಾಯದಿಂದ ನೇಗಿಲಿಗೆ ಹೆಗಲು ಬಳಸಿ ಬೇಸಾಯ ಮಾಡಲು ಆರಂಭಿಸಿದ್ದಾರೆ.ಸುಮಾರು 8 ರಿಂದ 10 ಎಕರೆ ಭೂಮಿ ಇರುವ ರೈತರಿಗೆ ಬೆಳೆ ಸಾಲ ನೀಡಿದರೆ, ಹಣ ಹೆಚ್ಚು ಪೋಲಾಗುತ್ತದೆ. ಅಲ್ಲದೇ ಅಧಿಕ ಸಾಲಮನ್ನಾ ಪಡೆಯುವ ಶ್ರೀಮಂತ ರೈತರು ಹಣವನ್ನು ಬಡ್ಡಿಗೆ ನೀಡಿ, ಗ್ರಾಮಗಳಲ್ಲಿ ಅನಧಿಕೃತ ಲೇವಾದೇವಿ ವ್ಯವಹಾರ ಮಾಡುತ್ತಿದ್ದಾರೆ. ಆದ್ದರಿಂದ 2-3 ಎಕರೆ ಜಮೀನು ಇರುವ ಸಣ್ಣ ರೈತರಿಗೆ ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು ಎಂದು ರೈತ ಶಿವಕುಮಾರ್ ಒತ್ತಾಯಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


