ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಿದ್ಯಾರಣ್ಯಪುರದ ತಿಂಡ್ಲು ಬಳಿ ಇರುವ ನಾರಾಯಣ ಈ ಟೆಕ್ನಿಕೊ ಶಾಲೆಯಲ್ಲಿ ನಡೆದಿದೆ.ವೆಂಕಟೇಶ್ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಗಣಿತ ಶಿಕ್ಷಕ. ಸರಿಯಾಗಿ ಕಲಿತ್ತಿಲ್ಲ ಎಂದು ವೆಂಕಟೇಶ್ ಡಸ್ಟರ್ ನಿಂದ ವಿದ್ಯಾರ್ಥಿ ತಲೆ ಓಪನ್ ಮಾಡಿದ್ದು, ಕ್ಲಾಸ್ ರೂಂನಲ್ಲಿ ಹಾಕಲಾಗಿರೋ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಖಂಡಿಸಿ ಪೋಷಕರಿಂದ ಶಾಲೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಶಿಕ್ಷಕ ವೆಂಕಟೇಶ್ ವಿರುದ್ಧ ವಿದ್ಯಾರ್ಥಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.Sign in to your account
Username or Email Address


Password

 Remember Me


