ಬೆಂಗಳೂರು: ಯಲಹಂಕದ ರೆಸಾರ್ಟ್‍ನಲ್ಲಿ ನಿನ್ನೆಯಿಂದ ನಡೆಯುತ್ತಿರುವ ಬಿಜೆಪಿ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಇವತ್ತು ಬೆಂಗಳೂರಿನ 13 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ.ಇವತ್ತು ಹಾವೇರಿ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ವಿಜಯಪುರ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಯಥಾ ಪ್ರಕಾರ ನಾಯಕರ ಪರವಾಗಿ ಕಾರ್ಯಕರ್ತರ ಲಾಬಿ ಜೋರಾಗಿತ್ತು. ಕೆಲವರು ನಾಯಕರ ಕಾಲಿಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.ಸಭೆಯಲ್ಲಿ ನಿನ್ನೆ ಬೆಂಗಳೂರಿನ 13 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಚರ್ಚೆ ಆಗಿತ್ತು. ಇವತ್ತು ಮತ್ತೆ 13 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗಳೂರಿನ 14 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್ಮುಖ್ಯವಾಗಿ ವಿ.ಸೋಮಣ್ಣ ಹೆಸರು ಗೋವಿಂದರಾಜನಗರದಿಂದ ಪ್ರಸ್ತಾಪವಾಗಿದೆ. ಆದರೂ, ಹನೂರಿನಿಂದಲೇ ಟಿಕೆಟ್ ಕೊಡಬೇಕು. ಪ್ರೀತಮ್ ನಾಗಪ್ಪ ಗೆಲುವು ಅಸಾಧ್ಯ ಅಂತ ನಾಯಕರಿಗೆ ಸೋಮಣ್ಣ ಬೆಂಬಲಿಗರು ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.ಯಾವ ಕ್ಷೇತ್ರದಲ್ಲಿ ಯಾರು ಆಕಾಂಕ್ಷಿಗಳು?
1. ಗೋವಿಂದರಾಜನಗರ – ವಿ.ಸೋಮಣ್ಣ/ ಉಮೇಶ್ ಶೆಟ್ಟಿ
2. ಮಹಾಲಕ್ಷ್ಮಿ ಲೇಔಟ್ – ಹರೀಶ್/ ನೆ.ಲ.ನರೇಂದ್ರ ಬಾಬು/ ನಾಗರಾಜ್
3. ಸರ್ವಜ್ಞ ನಗರ – ಪದ್ಮನಾಭ ರೆಡ್ಡಿ/ ಎಂ.ಎನ್.ರೆಡ್ಡಿ
4. ವಿಜಯನಗರ – ರವೀಂದ್ರ/ ಅಶ್ವಥ್ ನಾರಾಯಣ್
5. ಬಿ.ಟಿ.ಎಂ.ಲೇಔಟ್ – ಲಲ್ಲೇಶ್ ರೆಡ್ಡಿ/ ವಿವೇಕ್ ರೆಡ್ಡಿ/ ಜಯದೇವ
6. ಬ್ಯಾಟರಾಯನಪುರ – ರವಿ/ ರಾಜಗೋಪಾಲ್/ ಮುನೀಂದ್ರ ಕುಮಾರ್
7. ಶಾಂತಿನಗರ – ವಾಸುದೇವ್ ಮೂರ್ತಿ/ ಬಿ.ಎನ್.ಎಸ್ ರೆಡ್ಡಿ/ ಶ್ರೀಧರ್
8. ರಾಜರಾಜೇಶ್ವರಿನಗರ – ಮುನಿರಾಜುಗೌಡ/ ಹನುಮಂತರಾಯಪ್ಪ/ ಶಿಲ್ಪಾ ಗಣೇಶ್
9. ಗಾಂಧಿನಗರ – ಶಿವಕುಮಾರ್/ ಸಪ್ತಗಿರಿಗೌಡ
10. ಪುಲಿಕೇಶಿ ನಗರ – ಮುನಿಕೃಷ್ಣ/ ಸೋಮಶೇಖರ್
11. ಶಿವಾಜಿನಗರ – ಕಟ್ಟಾ ಸುಬ್ರಹ್ಮಣ್ಯ ನಾಯ್ಡು
12. ಚಿಕ್ಕಪೇಟೆ – ಉದಯ್ ಗರುಡಾಚಾರ್/ ಎನ್.ಆರ್.ರಮೇಶ್
13. ಆನೇಕಲ್ – ನಾರಾಯಣಸ್ವಾಮಿSign in to your account
Username or Email Address


Password

 Remember Me


