ಕಲಬುರಗಿ: ಸರಣಿ ಕೊಲೆಗಳನ್ನು ಮಾಡಿಸಿ ಜೈಲಿನಲ್ಲಿ ಇರಬೇಕಾದ ಕೋಣ ಇವತ್ತು ನಮ್ಮ ಶಾಸಕನಾಗಿದ್ದಾನೆ. ಆ ಈಳಿಗೆರ್ ಕೋಣವನ್ನು ನಾವು ಕಡಿಯಲೇಬೇಕು ಅಂತಾ ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ವಿರುದ್ಧ ಮಾಜಿ ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣ ಪಾಟೀಲ್ ಕಾರ್ಯಕರ್ತರ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.ತಮ್ಮ ಭಾಷಣದಲ್ಲಿ ಆ ಈಳೀಗನ ಶರ್ಟ್ ಹಿಡಿದು ಬಾರಿಸುವ ತನಕ ಸಮಾಧಾನವಿಲ್ಲ. ಆ ಈಳಿಗೇರ ಕೋಣ ಮುಂದೆ ಬರಬಾರದು. ಐದು ಬಾರಿ ಶಾಸಕನಾದ ಇವನು ನಮ್ಮ ತಂದೆಗೆ ಎಂಎಲ್‍ಸಿ ಆಗುವಂತೆ ಹೇಳ್ತಾನೆ. ಹಾಗಾಗಿ ನೀವೆಲ್ಲರೂ ನಮ್ಮ ತಂದೆಗೆ ಮತ ನೀಡಬೇಕು ಅಂತಾ ಕಾರ್ಯಕರ್ತರ ಸಭೆಯಲ್ಲಿ ಅರುಣ್ ಪಾಟೀಲ್ ಗುಡುಗಿದ್ದಾರೆ.ಅಫ್‍ಜಲ್‍ಪುರ ಶಾಸಕರಾಗಿದ್ದ ಮಾಲೀಕಯ್ಯ ಗುತ್ತೆದಾರ್ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇತ್ತ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ವೈ.ಪಾಟೀಲ್ ಕಾಂಗ್ರೆಸ್ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರ ಮಧ್ಯೆ ಚುನಾವಣಾ ಯುದ್ಧ ಆರಂಭವಾಗಿದೆ.Sign in to your account
Username or Email Address


Password

 Remember Me


