ಮೈಸೂರು: ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಯಾಕೆ ಅವರಪ್ಪ ಯಡಿಯೂರಪ್ಪ ಬೇಕಾದ್ರೆ ಬಂದು ಸ್ಪರ್ಧೆ ಮಾಡಲಿ ಅಂತಾ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.ಯಡಿಯೂರಪ್ಪಗೂ ವರುಣಾ ಕ್ಷೇತ್ರಕ್ಕೂ ಏನು ಸಂಬಂಧ? ಅವರು ಬಂದ ತಕ್ಷಣ ಜನರು ಓಡೋಡಿ ಬರುವದಿಲ್ಲ. ನನ್ನ ಮಗ ಬಂದು ಚುನಾವಣೆಗೂ ನಿಂತರೂ ಸಿಎಂ ಮಗ ಅಂತಾ ವೋಟ್ ಹಾಕಲ್ಲ. ಸಿಎಂ ಆಗಿ ನಾನು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದ್ದೇನೆ. ಈ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿರೋದು ನಾನೇ ಹೊರತು ಯಡಿಯೂರಪ್ಪ ಅಲ್ಲ. ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗೋಲ್ಲ. ಜನರಿಗೆ ಯಾರಿಗೆ ವೋಟ್ ಹಾಕಬೇಕು ಅಂತ ಗೊತ್ತಿದೆ. ಆ ರೀತಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳು ನಿಂತು ಗೆಲ್ಲೋದಾಗಿದ್ರೆ ಯಾರು ಬೇಕಾದ್ರು ಎಲ್ಲೆಲ್ಲೋ ನಿಲ್ತಿದ್ರು ಅಂತಾ ಅಂದ್ರು.ಚಾಮುಂಡೇಶ್ವರಿ ಕ್ಷೇತ್ರದ ಜನ ಈಗಾಗಲೇ ನಿರ್ಧಾರ ಮಾಡಿದ್ದಾರೆ. ಈ ಕ್ಷೇತ್ರದ ಜನರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ, ಅವರೆಲ್ಲ ನನಗೆ ಮತ ಹಾಕ್ತಾರೆ ಅಂತ ನನಗೆ ವಿಶ್ವಾಸವಿದೆ. ಕ್ಷೇತ್ರದಲ್ಲಿ 5 ದಿನ ಪ್ರಚಾರ ನಡೆಸಿದ್ದೇನೆ. ನಾನು ಯಾವತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ದೂರ ಉಳಿದಿಲ್ಲ. ಮೈಸೂರಿಗೆ ಬಂದಾಗಲೆಲ್ಲಾ ಚಾಮುಂಡೇಶ್ವರಿ ಕ್ಷೇತ್ರದ ಜನರೇ ನನ್ನನ್ನ ಜಾಸ್ತಿ ಭೇಟಿ ಮಾಡ್ತಿದ್ದೆ. ಹಾಗಾಗಿ ಗೆಲ್ಲುವ ವಿಶ್ವಾಸ ನನಗಿದೆ ಅಂತಾ ಸಿಎಂ ಹೇಳಿದರು.ನಾಳೆಯಿಂದ ರಾಹುಲ್ ಗಾಂಧಿ ಜೊತೆ ಪ್ರವಾಸ ಮಾಡ್ತಿನಿ. ಮೈಸೂರು ಪ್ರವಾಸ ನಂತರ ರಾಜ್ಯ ಪ್ರವಾಸ ಕೈಗೊಳ್ಳುವುದರ ಜೊತೆಗೆ ವರುಣಾ ಕ್ಷೇತ್ರದ ಪ್ರಚಾರಕ್ಕೆ ಬರ್ತಿನಿ. ನಾಳೆಯಿಂದ ದಾವಣಗೆರೆ ಸೇರಿದಂತೆ ಹಲವೆಡೆ ಪ್ರಚಾರ ಮಾಡ್ತಿನಿ. 8ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.Sign in to your account
Username or Email Address


Password

 Remember Me


