ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಬ್ಲಿಕ್ ಟಿವಿಗೆ ಸಂದರ್ಶನ ನೀಡಿದ್ದು, ರಾಜ್ಯ ವ್ಯಾಪಿ ಚರ್ಚೆಯಾಗಿದ್ದ ಮಹದಾಯಿ ವಿವಾದದ ಬಗ್ಗೆ ಅಮಿತ್ ಶಾ ಸ್ಪಷ್ಟನೆಯನ್ನು ನೀಡಿದ್ದಾರೆ.ರಾಜ್ಯ ಸರ್ಕಾರ ಮಹದಾಯಿ ವಿವಾದ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯುವಂತೆ ಮನವಿ ಮಾಡಿ ಪತ್ರ ಬರೆದಿತ್ತು. ಮಹದಾಯಿ ವಿವಾದವನ್ನು ಪ್ರಧಾನಿ ಮೋದಿ ಮಧ್ಯಸ್ಥಿಕೆಯಲ್ಲಿ ಬಗೆಹರಿಸಬೇಕೆಂದು ಕರ್ನಾಟಕ ಸರ್ಕಾರ ಮನವಿಯನ್ನು ಮಾಡಿಕೊಂಡಿತ್ತು. ಆದ್ರೆ ಕೇಂದ್ರ ಸರ್ಕಾರ ಸಭೆ ಕರೆಯದನ್ನೇ ದಾಳವಾಗಿ ಬಳಸಿಕೊಂಡ ಸಿದ್ದರಾಮಯ್ಯ ಸರ್ಕಾರ ಮೋದಿಜೀ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆಯನ್ನು ತೋರುತ್ತಿದೆ ಅಂತಾ ಆರೋಪಿಸಿತ್ತು. ಈ ಸಂಬಂಧ ಸಂದರ್ಶನದಲ್ಲಿ ಮಹದಾಯಿ ವಿವಾದದ ಬಗ್ಗೆ ಅಮಿತ್ ಶಾರನ್ನು ಕೆಲವು ಪ್ರಶ್ನೆಗಳನ್ನು ಸಹ ಕೇಳಲಾಗಿತ್ತು. ಅವುಗಳು ಈ ಕೆಳಗಿನಂತಿವೆ.ಹೆಚ್.ಆರ್.ರಂಗನಾಥ್ : ಮೋದಿಜೀ ಸಭೆಯನ್ನೇ ಕರೆಯಲಿಲ್ಲ….?
ಅಮಿತ್ ಶಾ: ನಾವು ಕರ್ನಾಟಕ ಸರ್ಕಾರಕ್ಕಾಗ್ಲಿ, ಜನತೆಗಾಗ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಮೊದಲು ತಾರತಮ್ಯ ಆಗ್ತಿತ್ತು. ನಾವು ಅದನ್ನು ನಿಲ್ಲಿಸಿದೆವು. ನಾವು ಯಾವತ್ತೂ ಕರ್ನಾಟಕಕ್ಕೆ ಉಪಕಾರ ಮಾಡ್ತಿದ್ದೇವೆ ಅಂತ ಹೇಳಿಲ್ಲ. ಆದ್ರೆ ಸಿದ್ದರಾಮಯ್ಯ ಇದನ್ನು ತಿರುಚುತ್ತಿದ್ದಾರೆ.ಹೆಚ್.ಆರ್.ರಂಗನಾಥ್ : ಎಲೆಕ್ಷನ್ ಆದ್ಮೇಲೆ ಬಗೆಹರಿಸುತ್ತೀರಾ..?
ಅಮಿತ್ ಶಾ: ಮಹದಾಯಿ ವಿಚಾರವನ್ನು ಯಡಿಯೂರಪ್ಪ ಸರ್ಕಾರ ರಚನೆಯಾದ ತಕ್ಷಣ ಬಗೆಹರಿಸುತ್ತೇವೆ.ಹೆಚ್.ಆರ್.ರಂಗನಾಥ್ : ಸಿದ್ದರಾಮಯ್ಯ ಹೇಳ್ತಾರೆ ಮೋದಿ ಸಭೆ ಕರೆದು ಚರ್ಚಿಸಿದ್ದಿದ್ರೆ ಮಹದಾಯಿ ವಿವಾದ ಬಗೆಹರಿಯುತ್ತಿತ್ತು ಅಂತ..?
ಅಮಿತ್ ಶಾ: ಮಹದಾಯಿ ವಿವಾದ ಒಂದೇ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ಇದು ಎರಡು ರಾಜ್ಯಕ್ಕೆ ಸಂಬಂಧಿಸಿದ್ದು. ಇದು ಕೇವಲ ಗೋವಾ ಸರ್ಕಾರದಿಂದ ಆಗುವುದಿಲ್ಲ. ಇಲ್ಲಿರುವ ಸರ್ಕಾರ ಧ್ವಜ, ಲಿಂಗಾಯ, ಮಹದಾಯಿ ವಿಚಾರವನ್ನು ಮತಬ್ಯಾಂಕ್ ಆಗಿ ನೋಡ್ತಿದೆ. ಹಾಗೆ ನೋಡಿದ್ರೆ ಈ ಸಮಸ್ಯೆಗಳು ಬಗೆಹರಿಯೋಕೆ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರ ರಚನೆಯಾದ್ರೆ ಆರೇ ತಿಂಗಳಲ್ಲಿ ಕರ್ನಾಟಕಕ್ಕೆ ಅನುಕೂಲವಾಗುವ ರೀತಿಯಲ್ಲಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸ್ತೇವೆ.ಸಂದರ್ಶನದಲ್ಲಿ ಮುಂದಿನ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾದ 6 ತಿಂಗಳಲ್ಲಿ ಮಹದಾಯಿ ವಿವಾದವನ್ನು ಇತ್ಯರ್ಥ ಮಾಡಲಾಗುವುದು ಎಂಬ ಭರವಸೆಯನ್ನು ನಾಡಿನ ಜನತೆಗೆ ನೀಡಿದ್ದಾರೆ.Sign in to your account
Username or Email Address


Password

 Remember Me


