ಕೊಪ್ಪಳ: ರಾಜ್ಯದಲ್ಲಿ ಮಂಗಳವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರೂ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಅಕ್ರಮ ಮದ್ಯ ಮಾರಾಟ ಜೋರಾಗಿದೆ.ಗಂಗಾವತಿ ತಾಲೂಕಿನಲ್ಲಿ ಮನೆ-ಮನೆಯಲ್ಲಿ ಅಕ್ರಮ ಮದ್ಯ ಸಿಗುತ್ತದೆ. ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ತಾಲೂಕಿನ ಬಹುತೇಕ ಗ್ರಾಮಗಳಿಗೆ ಅಕ್ರಮ ಮದ್ಯ ಸಾಗಿಸುತ್ತಿದ್ದಾರೆ. ಗ್ರಾಮದ ಮನೆ ಮನೆಯಲ್ಲಿ ಅಕ್ರಮ ಮದ್ಯ ಮಾರಾಟದ ದಂಧೆ ಜೋರಾಗಿದೆ. ಆದ್ರೆ ಅಕ್ರಮವನ್ನು ತಡೆಯಬೇಕಾದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಗಂಗಾವತಿ ತಾಲೂಕಿನಾದ್ಯಂತ ಕೇಳಿಬರುತ್ತಿದೆ.ಕಳೆದ ಹತ್ತು ವರ್ಷದಿಂದ ಗಂಗಾವತಿ ಅಬಕಾರಿ ಇಲಾಖೆಯನ್ನ ಮನೆ ಮಾಡಿಕೊಂಡ ಮಾಜಿ ಶಾಸಕ ಅನ್ಸಾರಿಯ ಸ್ನೇಹಿತ ಚಿನ್ನಪ್ಪ, ಮಾಮೂಲಿ ಪಡೆದು ಅಕ್ರಮ ಮದ್ಯ ಮಾರಾಟಕ್ಕೆ ಸಾಥ್ ನೀಡಿದ ಆರೋಪ ಕೇಳಿ ಬಂದಿತ್ತು. ಪ್ರತಿ ಮದ್ಯದ ಅಂಗಡಿಗಳಿಂದ ತಿಂಗಳಿಗೆ ಹತ್ತು ಸಾವಿರ ಮಾಮೂಲಿ ಪಡೆದು ಚಿನ್ನಪ್ಪ ಮನೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.ಮದ್ಯ ಮಾರಾಟದ ಕುರಿತು ಸಂಘಟನೆಗಳು ಚಿನ್ನಪ್ಪನ ವಿರುದ್ಧ ಮೇಲಾಧಿಕಾರಿಗಳ ಗಮನಕ್ಕೆ ತಂದ ಸಂಘಟನೆಯ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರಂತೆ. ಒಟ್ಟಿನಲ್ಲಿ ಇದೀಗ ಜಿಲ್ಲಾಧಿಕಾರಿಗಳು ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.https://youtu.be/y_4sS2Ug7KESign in to your account
Username or Email Address


Password

 Remember Me


