ಚಿಕ್ಕಬಳ್ಳಾಪುರ: 11 ಕೆ ವಿ ವಿದ್ಯುತ್ ಲೈನ್ ದುರಸ್ಥಿ ವೇಳೆ ವಿದ್ಯುತ್ ಹರಿದು ಬೆಸ್ಕಾಂ ಹೊರಗುತ್ತಿಗೆ ನೌಕರನೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ವೀರಾಪುರ ಬಳಿ ನಡೆದಿದೆ.ಬೆಸ್ಕಾಂ ನ ಹೊರಗುತ್ತಿಗೆ ನೌಕರ ತೌಶೀಫ್ (20) ಮೃತ ಯುವಕ. ಕಳೆದ ರಾತ್ರಿ ಮಳೆಗೆ ನೆಲಕ್ಕುರುಳಿದ್ದ 11 ಕೆ ವಿ ವಿದ್ಯುತ್ ಲೈನ್ ದುರಸ್ಥಿ ವೇಳೆ ಏಕಾಏಕಿ ವಿದ್ಯುತ್ ಹರಿದಿದೆ. ಈ ವೇಳೆ ಕಂಬದ ಮೇಲಿದ್ದ ತೌಶೀಫ್ ಗೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.ಈ ಘಟನೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Sign in to your account
Username or Email Address


Password

 Remember Me


