ಬೆಂಗಳೂರು: ಶ್ವಾನವೊಂದು ಆಹಾರ ನೀರು ಬಿಟ್ಟು ದೇವರ ಗುಡಿಯನ್ನು ಸುತ್ತುವ ಮೂಲಕ ಅಚ್ಚರಿಗೆ ಕಾರಣವಾಗಿರುವ ಘಟನೆ ನಗರದ ಹೊರವಲಯ ಬನ್ನೇರುಘಟ್ಟದಲ್ಲಿ ನಡೆದಿದೆ.ಬನ್ನೇರುಘಟ್ಟದ ಶ್ರೀ ಚಂಪಕಧಾಮಸ್ವಾಮಿ ದೇವಾಲಯದ ಮುಂದೆ ಇರುವ ಬಿಸಿಲು ಮಾರಮ್ಮನ ಗುಡಿ ಹಾಗೂ ಗರುಡಗಂಬವನ್ನು ಶ್ವಾನವೊಂದು ಕಳೆದ ಮೂರು ದಿನಗಳಿಂದ ಸತತವಾಗಿ ಆಹಾರ ನೀರು ಬಿಟ್ಟು ಸುತ್ತುತ್ತಿರುವುದು ಸ್ಥಳೀಯರ ಆಚ್ಚರಿಗೆ ಕಾರಣವಾಗಿದೆ. ಶ್ವಾನ ಯಾವ ಕಾರಣಕ್ಕಾಗಿ ಈ ರೀತಿ ಸುತ್ತುತ್ತಿದೆ ಎಂಬುದು ಮಾತ್ರ ತಿಳಿದು ಬಂದಿಲ್ಲ. ಇದನ್ನೂ ಓದಿ: 5 ದಿನಗಳಿಂದ ಅರಳಿಕಟ್ಟೆ ಸುತ್ತುತ್ತಿದೆ ನಾಯಿ-ಬೈಯಪ್ಪನ ಹಳ್ಳಿಯಲ್ಲಿ ಅಚ್ಚರಿಯ ಘಟನೆ-ವಿಡಿಯೋ ನೋಡಿಶ್ವಾನವನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಅಗಮಿಸುತ್ತಿದ್ದಾರೆ. ಇನ್ನು ಬನ್ನೇರುಘಟ್ಟದ ಶ್ರೀ ಚಂಪಕಧಾಮಸ್ವಾಮಿ ಜಾತ್ರೆ ಮುಗಿದು ಕೆಲವೇ ದಿನಗಳಾಗಿದ್ದು ಇದೀಗ ಶ್ವಾನ ದೇವರ ಗುಡಿ ಸುತ್ತುತ್ತಿರುವುದು ಸ್ಥಳೀಯರಲ್ಲಿ ಒಂದು ರೀತಿಯ ಆತಂಕಕ್ಕೆ ಕಾರಣವಾಗಿದೆ.https://youtu.be/cb5PPuAu07sSign in to your account
Username or Email Address


Password

 Remember Me


