ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಅಧೀನದಲ್ಲಿರುವ ಶೀರೂರು ಮಠಾಧೀಶರಿಗೆ ಜೆಡಿಯು ಪಕ್ಷ ಗಾಳ ಹಾಕಿದೆ. ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿದ್ದ ಲಕ್ಷ್ಮೀವರ ತೀರ್ಥ ಶ್ರೀಪಾದರಿಗೆ ಜೆಡಿಯು ಪಕ್ಷ ಸೇರುವಂತೆ ಪತ್ರ ಬರೆದಿದೆ.ಜೆಡಿಯು ಜಿಲ್ಲಾಧ್ಯಕ್ಷರು ಸ್ವಾಮೀಜಿಯವರನ್ನು ಭೇಟಿಯಾಗಿ ಮಾತುಕತೆ ಮಾಡಿದ್ದಾರೆ. ತಾವು ಇಚ್ಛಿಸಿದರೆ ಜೆಡಿಯುನಿಂದ ಟಿಕೆಟ್ ನೀಡುವುದಾಗಿ ಆಫರ್ ಕೊಟ್ಟಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಜೆಡಿಯು ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡಿದೆ. ಒಮ್ಮತದ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಜೆಡಿಎಸ್ ಮತ್ತು ಜೆಡಿಯುನ ಮಾನಸಿಕತೆಗೂ ಸ್ವಾಮೀಜಿಗಳ ದೃಷ್ಟಿಕೋನಕ್ಕೂ ಹೊಂದಾಣಿಕೆ ಆಗುವುದರಿಂದ ಈ ಬೇಡಿಕೆ ಇಟ್ಟಿರುವುದಾಗಿ ಜನತಾದಳ ಹೇಳಿದೆ.ಜಿಲ್ಲೆಯಲ್ಲಿ ಈವರೆಗೆ ಐದು ಸ್ಥಾನಗಳ ಪೈಕಿ ಎರಡು ಅಭ್ಯರ್ಥಿಗಳ ಘೋಷಣೆ ಮಾಡಿದ್ದು, ಇದೀಗ ಮೂರನೇ ಅಭ್ಯರ್ಥಿಯ ತಲಾಶ್ ನಲ್ಲಿದ್ದ ಜೆಡಿಎಸ್ ಗೆ ಶೀರೂರು ಶ್ರೀಗಳನ್ನು ಸೆಳೆದರೆ ಕರಾವಳಿ ಜಿಲ್ಲೆಯಲ್ಲಿ ಬಲ ಬರುತ್ತದೆ ಎಂಬ ಲೆಕ್ಕಾಚಾರ ಹಾಕಿದೆ.ಜೆಡಿಯು ಜಿಲ್ಲಾಧ್ಯಕ್ಷ ರಾಜೀವ ಕೋಟ್ಯಾನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾಮಕೃಷ್ಣ ಹೆಗ್ಡೆಯವರ ತತ್ವಾದರ್ಶದ ಮೇಲೆ ಚುನಾವಣೆ ಎದುರಿಸಲಿದ್ದೇವೆ. ಶೀರೂರು ಶ್ರೀಗಳೂ ಹೆಗ್ಡೆಯವರ ಆದರ್ಶ ಮೆಚ್ಚಿದವರು. ಉಡುಪಿಯಲ್ಲಿ ಸ್ವಾಮೀಜಿ ನಮ್ಮ ಮೈತ್ರಿಯಲ್ಲಿ ಸ್ಪರ್ಧಿಸಬೇಕೆಂಬುದು ನಮ್ಮ ಆಕಾಂಕ್ಷೆ. ನಿರ್ಧಾ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬೆಂಬಲ ಕೊಡುವ ಭರವಸೆಯಿದೆ ಎಂದು ಹೇಳಿದರು.Sign in to your account
Username or Email Address


Password

 Remember Me


