ಆನೇಕಲ್: ಇತಿಹಾಸ ಪ್ರಸಿದ್ಧ ಮದ್ದೂರಮ್ಮ ಜಾತ್ರೆಯಲ್ಲಿ 75 ಅಡಿ ಎತ್ತರದ ರಥ ಉರುಳಿಬಿದ್ದಿದ್ದು ಅದೃಷ್ಟವಶಾತ್ ಸಂಭವಿಸಬೇಕಿದ್ದ ಭಾರಿ ಅನಾಹುತ ತಪ್ಪಿದೆ.ಹೆಚ್ಚು ಎತ್ತರವಿದ್ದ ಕಾರಣ ನಿಯಂತ್ರಣ ಕಳೆದುಕೊಂಡು ಉರುಳಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಬೆಂಗಳೂರು ಹೊರವಲಯ ಅನೇಕಲ್ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಇಂದು ಮದ್ದೂರಮ್ಮ ದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು ಈ ಜಾತ್ರೆಗೆ ಸುತ್ತಮುತ್ತಲಿನ 7 ಗ್ರಾಮಗಳಿಂದ 100 ಅಡಿಗೂ ಎತ್ತರದ ರಥಗಳನ್ನು ದೇವಸ್ಥಾನದ ಬಳಿಗೆ ಎಳೆದು ತರುತ್ತಾರೆ.ಈ ದೇವಾಲಯಕ್ಕೆ ಈ ಹಿಂದೆ ಸುಮಾರು 11 ಹಳ್ಳಿಗಳಿಂದ ರಥಗಳು ಬರುತಿತ್ತು. ಬೆಂಗಳೂರು ಬೆಳವಣಿಗೆಯಾದಂತೆ ಹೊಲಗದ್ದೆಗಳು ಲೇಔಟ್ ಅದ ಪರಿಣಾಮ ಇದೀಗ ರಥಗಳನ್ನು ಎಳೆದು ತರಲು ಆಗದೆ ಕೇವಲ 7 ಗ್ರಾಮಗಳ ರಥಗಳು ಬರುತ್ತಿವೆ.https://www.youtube.com/watch?v=2qNdNlSwWNY&feature=youtu.be Sign in to your account
Username or Email Address


Password

 Remember Me


