ಬೆಂಗಳೂರು: ವಯಸ್ಸಿನ ಅಂತರವಿದೆ ಎನ್ನುವ ಕಾರಣಕ್ಕೆ ಲಕ್ಷ್ಮೀ ನಾಯ್ಕ್ ಪೋಷಕರು ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಜೊತೆ ಮದುವೆ ಆಗಲು ನಿರಾಕರಿಸಿದ್ದರು ಎನ್ನುವ ವಿಚಾರ ಈಗ ತಿಳಿದು ಬಂದಿದೆ.ಇಬ್ಬರ ನಡುವೆಯೂ 13 ವರ್ಷ ಅಂತರವಿದೆ ಎನ್ನುವ ಕಾರಣಕ್ಕೆ ಈ ಮದುವೆ ಬೇಡ, ನಿನಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಸುತ್ತೇವೆ ಎಂದು ಹೇಳಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.ಸುಂದರ್ ಪರಿಚಯ ಆಗಿದ್ದು ಹೇಗೆ?
ಲಕ್ಷ್ಮೀ ನಾಯ್ಕ್ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ 3ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದು, 7-8 ತಿಂಗಳ ಹಿಂದೆ ತನ್ನ ಓದುತ್ತಿದ್ದ ಕಾಲೇಜಿನಲ್ಲೇ ಸುಂದರ್ ಗೌಡ ಪರಿಚಯವಾಗಿತ್ತು. ಇವೆಂಟ್ ಮ್ಯಾನೇಜರ್ ಆಗಿರೋ ಸುಂದರ್ ಗೌಡ ಸಹೋದರಿಯ ಪತಿಯ ಮೂಲಕ ಪರಿಚಯಗೊಂಡು ನಂತರ ಮದುವೆಯ ಹಂತಕ್ಕೆ ತಲುಪಿತ್ತು.ತಂದೆ ಶಾಸಕ, ತಾಯಿ ಡಾ.ಗೀತಾ ಚೀಫ್ ಮೆಡಿಕಲ್ ಆಫೀಸರ್ ಆಗಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬಕ್ಕೆ ತಕ್ಕ ಹಾಗೆ ಐಪಿಎಸ್, ಐಎಎಸ್ ಗ್ರೇಡ್ ಅಧಿಕಾರಿಯನ್ನು ಹುಡುಕುತ್ತಿದ್ದರು. ಶಿವಮೂರ್ತಿ ನಾಯ್ಕ್ ತನ್ನ ಮಗಳು ಲಕ್ಷ್ಮೀಗೆ ಐಪಿಎಸ್ ಅಧಿಕಾರಿಯನ್ನು ಹುಡುಕಿ ಮದುವೆಯಾಗಲು ಹೇಳಿದ್ದರು. ಆದರೆ ಲಕ್ಷ್ಮೀ ನಾಯ್ಕ್ ಐಪಿಎಸ್ ಅಧಿಕಾರಿಯನ್ನು ಮದುವೆಯಾಗಲು ತಿರಸ್ಕರಿಸಿದ್ದರು.ಲಕ್ಷ್ಮಿ ನಾಯ್ಕ್ ಹೆಸರಲ್ಲಿರುವ ಸುಮಾರು 50 ಕೋಟಿ ಆಸ್ತಿ ಹಾಗೂ 5-6 ಶಾಲೆಗಳಿವೆ. ಸುಂದರ್ ಗೌಡ ಜತೆಗಿನ ಪ್ರೀತಿ ವಿಷಯ ಇತ್ತೀಚೆಗಷ್ಟೆ ಲಕ್ಷ್ಮಿ ಕುಟುಂಬಕ್ಕೆ ಗೊತ್ತಾಗಿತ್ತು.ನನ್ನ ಮಗಳನ್ನು ಸುಂದರ್ ಗೌಡ ಹೇಗೆ ನೋಡಿಕೊಳ್ತಾನೆ? ಅವನಿಗೆ 36 ವರ್ಷ, ನನ್ನ ಮಗಳಿಗೆ ಇನ್ನೂ 23 ವರ್ಷ. ನನ್ನ ಮಗಳ ಹೆಸರಲ್ಲಿ 50 ಕೋಟಿ ರೂಪಾಯಿ ಆಸ್ತಿ ಪಾಸ್ತಿ ಇದೆ. ಸುಂದರ್ ಗೌಡ ಮಾಸ್ತಿಗುಡಿ ಕೇಸ್‍ನಲ್ಲಿ ಜೈಲಿಗೆ ಹೋಗಿ ಬಂದವನು. ಇವನು ಹೇಗೆ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಲಕ್ಷ್ಮಿ ತಾಯಿ ಡಾ. ಗೀತಾ ತಮ್ಮ ಆಪ್ತರ ಬಳಿ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರಿಟ್ಟಿದ್ದಾರೆ.Sign in to your account
Username or Email Address


Password

 Remember Me


