ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಜೊತೆ ಸೇರಿ ಕರ್ನಾಟಕ ಗೆಲ್ತಾರಂತೆ. ರಾಹುಲ್ ಯುಗದಲ್ಲಿ ಅಮೇಥಿ ಗೆಲ್ಲೋದೂ ಕಷ್ಟ ಇದೆ. ಅಮೇಥಿಯಲ್ಲೇ ಜೀರೋ ಆದವರು ಈಗ ಕರ್ನಾಟಕ ಗೆಲ್ತಾರಂತೆ. ಇದೊಂದು ಬಿಗ್ ಜೋಕ್ ಅಂತ ಬಿಜೆಪಿ ವರಿಷ್ಠ ಮುರಳೀಧರ್ ರಾವ್ ವ್ಯಂಗ್ಯವಾಡಿದ್ದಾರೆ.ಜನ ಸುರಕ್ಷಾ ಯಾತ್ರೆ ಸಂದರ್ಭದಲ್ಲಿ ಉಡುಪಿಯ ಕಿನ್ನಿಮೂಲ್ಕಿಯಲ್ಲಿ ಮಾತನಾಡಿದ ಅವರು, ರಾಹುಲ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಶೀಘ್ರ ಪಾತಾಳಕ್ಕೆ ಹೋಗ್ತದೆ. ಕಾಂಗ್ರೆಸ್ ಪಿಎಫ್ ಐ, ಎಸ್‍ಡಿಪಿಐ ಜೊತೆ ಕೈ ಜೋಡಿಸಿದ್ರೂ ಚುನಾವಣೆ ಗೆಲ್ಲೋಕಾಗಲ್ಲ ಅಂದ್ರು. ಇದನ್ನೂ ಓದಿ: ಸಿಎಂ ಚುನಾವಣೆ ಸಂದರ್ಭ ಕೃಷ್ಣಮಠಕ್ಕೆ ಬಂದ್ರೆ ಬಡಿಗೆ ತಗೊಳ್ಳಿ: ಶೋಭಾ ಕರಂದ್ಲಾಜೆಸಿಎಂ ಅವರ ನಂ.1 ಜಾಹೀರಾತು ನೋಡಿದ್ರೆ ನಗು ಬರುತ್ತದೆ. ನನಗೆ ತೆಲುಗು ಸಿನಿಮಾ ನೆನಪಾಗುತ್ತದೆ. ಖೈದಿ ನಂ.1, ರೌಡಿ ನಂ.1, ಕೇಡಿ ನಂ.1, ಗೂಂಡಾ ನಂ.1 ನೋಡಿದ ಹಾಗಾಗುತ್ತದೆ. ಇದು ಮಾಫಿಯಾ ಸರ್ಕಾರ. ಇವರಿಂದ ಅಭಿವೃದ್ದಿ ಅಸಾಧ್ಯ. ಕಾಂಗ್ರೆಸ್ ಲೆಕ್ಕಾಚಾರ ಮುಗಿದಿದೆ. ಇದು ಭೃಷ್ಟಾಚಾರಿಗಳ ಪಾರ್ಟಿ. ಸಿದ್ದರಾಮಯ್ಯ ಜೈಲಿಗೆ ಹೋಗುವ ದಿನವೂ ದೂರವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಉಪೇಂದ್ರ ಮಾತ್ರವಲ್ಲ, ಸೋನಿಯಾ ಗಾಂಧಿ ಬಿಜೆಪಿಗೆ ಬಂದ್ರೂ ಸ್ವಾಗತ- ಈಶ್ವರಪ್ಪ40 ಲಕ್ಷದ ವಾಚ್ ಕಟ್ಟಿ ನಾಚಿಕೆ ಬಿಟ್ಟು ವೇದಿಕೆಯಲ್ಲಿ ಕೂರ್ತಾರೆ. ನಾನು ಭೃಷ್ಟ ಅಲ್ಲ ಅಂತಾರೆ. ಸಿದ್ದರಾಮಯ್ಯ ಡಾನ್ ಮಾತ್ರವಲ್ಲ ಭ್ರಷ್ಟಾಚಾರಿನೂ ಹೌದು ಎಂದು ಟೀಕಿಸಿದ ಅವರು, ಕಾಂಗ್ರೆಸ್ ಫೇಲ್, ಸಿದ್ದರಾಮಯ್ಯ ಫೇಲ್ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ತಾಯಿ ಸೋನಿಯಾಗಾಂಧಿ, ಸಿಎಂ ದೇಹದಲ್ಲಿ ಹರಿಯುತ್ತಿರೋದು ಟಿಪ್ಪು ರಕ್ತ: ಈಶ್ವರಪ್ಪಸಿಎಂ ಗೆ ಪಿಎಫ್‍ಐ ಜೊತೆ ಪಾರ್ಟ್‍ನರ್ ಶಿಪ್ ಇದೆ. ಜನಸಂಘ ಅಂದ್ರೆ ಜೋಕ್ ಅಂದವರು ಈಗ ದೇಶದಲ್ಲಿ ಬಿಜೆಪಿ ಬೆಳವಣಿಗೆ ನೋಡಿ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 21 ರಾಜ್ಯಗಳಲ್ಲಿ ಬಿಜೆಪಿ ಇದೆ. ಮುಂದೆ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಜನ ಸುರಕ್ಷಾ ಯಾತ್ರೆಯಲ್ಲಿ ಸಿಲುಕಿದ ಗರ್ಭಿಣಿ – ಪೊಲೀಸರ ವಿರುದ್ಧ ಜನಾಕ್ರೋಶ






 Advertisement 




Sign in to your account
Username or Email Address


Password

 Remember Me


